ಹಚ್ಚಿದ್ದು ಕಿರು ಹಣತೆ
ಹೊಸೆದ ಪುಟ್ಟ ಬತ್ತಿ ತುಂಡು
ಹಾಕಿದ್ದ ತೊಟ್ಟು ಎಣ್ಣೆ ಮುಗಿಯುತ್ತಿದೆ.
ಮರೆತ ಕಥನ, ಮೆರೆದ ಜೀವ ಕದನ
ನೆನೆದು ಮೊರೆಯುತ್ದಿದೆ ಅಳಿದುಳಿದ ಕುಡಿ ಬೆಳಕು.
ಈಗುಳಿದಿರುವುದಷ್ಟೇ ನಿಜ ಸಾರ;
ಹಿಂದಿನದ್ದೆಲ್ಲಾ ನಿಸ್ಸಾರ
ಹೊರೆಯಬೇಕು ಬೆಳಕು,
ಹೊಳೆದು ಪೊರೆಯಬೇಕು ತೊರೆದೆಲ್ಲಾ ಅಳುಕು.
ಪಕ್ಕದಲ್ಲಿ ಪುಟ್ಟ ಸೊಡರು
ಬೆಳಗಲದೆಷ್ಟೊಂದು ಎಡರು ತೊಡರು
ಕರುಣಾಳು ಬಾ ಬೆಳಕೇ
ಸೊಡರನೊಮ್ಮೆ ಹೊತ್ತಿಸಿ ಇಡು
ಹಣತೆ ಬೇಕಾದರೆ ಬತ್ತಿಸಿಬಿಡು
ಬೆಳಕ ಮುಂದಕ್ಕೆ ಉಳಿಸಿಬಿಡು
ನಡೆಸು ಬಿಡಿಸಿ ಕತ್ತಲ ಭಯ
ಆಗಲೇ ಬೇಕು
ತಮಸ್ಸೋಮ ಜ್ಯೋತಿಗ೯ಮಯ!!