ನನ್ನ ಬಗ್ಗೆ ಹೇಳಿಕೊಳ್ಳುವುದಕ್ಕೆ ವಿಶೇಷವಾದುದ್ದೇನೂ ಇಲ್ಲ. ಇಲ್ಲಿ ಹೇಳಿಕೊಳ್ಳಲು ಇರುವಂತಹ ವಿಷಯಗಳೆಲ್ಲಾ ನಿಮ್ಮೆಲ್ಲರ ನೋಟದ ಮತ್ತು ಒಡನಾಟದ ಮೂರ್ತರೂಪ. ನಾನು ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹುಡುಕುವ ದಾರಿ ಹಿಡಿದು ನಡೆದಿದ್ದೇನೆ. ಉತ್ತರ ಸಿಕ್ಕಾಗ ‘ನಾನು’ ಇರುವುದಿಲ್ಲ. ನಡೆಸಿಕೊಂಡ ದಾರಿ ಮಾತ್ರ ಹಾಗೇ ಉಳಿದಿರುತ್ತದೆ, ಜೊತೆಗೆ ಸ್ನೇಹ ಕೂಡ!!!
ಸ್ವಂತ ಸುಖೈಃ ತುಳಸೀ ರಘುನಾಥ ಗಾಥಾ…..ತುಳಸೀದಾಸರು ಬರೆದಿರುವ ಎಲ್ಲವೂ ಅವರ ಅತ್ಮ ಸಂತೋಷಕ್ಕೆ ಎಂದು ಹೇಳಿಕೊಂಡಿದ್ದಾರೆ.
ಹಾಗೇ ನಾನೇನೇ ಬರೆದುಕೊಂಡರೂ ನನ್ನ ಮನಸ್ಸಂತೋಷಕ್ಕೆ.
ಇಲ್ಲಿ ಹೊಗಳಿಕೆಯ ಅಪೇಕ್ಷೆ ಇಲ್ಲ.
ನನ್ನ ಲೇಖನಗಳು ನಿಮ್ಮನ್ನು ಮುಟ್ಟಿದರೆ ನನಗೊಂದು ಅಶೀರ್ವಾದವೆನಿಸೀತು; ನಿಮ್ಮ ಹಾರೈಕೆ ನನಗೆ ದಾರಿದೀಪವಾದೀತು. ಧನ್ಯವಾದಗಳು!!!
ತಮ್ಮ ಲೇಖನಗಳು ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಈ ನಿಮ್ಮ ಲೇಖನಗಳು ಹೀಗೆ ನಿರಂತರವಾಗಿ ಸಾಗುತ್ತಿರಲಿ ಎಂದು ಆಶಿಸುತ್ತೇನೆ. ಸದ್ಗುರು ದತ್ತಾತ್ರೇಯ ಸ್ವಾಮಿಯ ಅನುಗ್ರಹವು ತಮ್ಮ ಮೇಲೆ ಸದಾ ಇರಲೆಂದು ಕೇಳಿಕೊಳ್ಳುತ್ತೇನೆ
LikeLike