Category Archives: ವಾಟ್ಸಪ್

ವಾಟ್ಸಾಪ್ ಉವಾಚ…

[11/12 6:16 AM] Shyama: ಅಶೋಕ್ ಚಕ್ರ ಪುರಸ್ಕೃತರ ಮನೆಯವರೊಬ್ಬರಿಗೆ ಭಾರತದ ಎಲ್ಲಾ ಟೋಲ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಇರತ್ತೆ. ಅದಕ್ಕೊಂದು ಐಡೆಂಟಿಟಿ ಕಾರ್ಡ್ ಕೊಟ್ಟಿರ್ತಾರೆ. ಅದನ್ನ ಟೋಲ್ನಲ್ಲಿ ಕುಳಿತಿದ್ದ ಹುಡುಗನಿಗೆ ತೋರಿಸಿದೆ.

’ನಿಮ್ಮ ಕಾರಿಗೆ ರೆಡ್ ಲೈಟ್ ಇಲ್ಲ, ಮತ್ತೆ ನೀವ್ಹೆಂಗೆ ವಿ.ಐ.ಪಿ ಆಗ್ತೀರಿ..?’ ಅಂತ ಕೇಳಿದ…

ಏನುತ್ತರ ಕೊಡಬೇಕೋ ಅರ್ಥ ಆಗಲಿಲ್ಲ… ’ನಾನು, ವಿ.ಐ.ಪಿ ಅಲ್ಲಪ್ಪಾ… ಮರಣೋತ್ತರ ಅಶೋಕ ಚಕ್ರ ಪಡೆದ ಅಧಿಕಾರಿಯ ಹೆಂಡತಿ. ನಮಗೆ ಟೋಲ್ಗಳಲ್ಲಿ ಉಚಿತವಾಗಿ ಪ್ರಯಾಣಿಸೋದಕ್ಕೆ ಅವಕಾಶ ಮಾಡಿಕೊಟ್ಟಿರೋ ಸರಕಾರಿ ಆದೇಶ ಇಲ್ಲಿದೆ ನೋಡು’ ಅಂದೆ…

’ಇಲ್ಲಾರೀ… ಇಂಥವಕ್ಕೆಲ್ಲ ಅಲವ್ ಮಾಡಲ್ಲ… ಐವತ್ತು ರುಪಾಯಿ ಕೊಡಿ’ ಅಂದ ಅವನು…

’ಈ ದೇಶಕ್ಕಾಗಿ ಗಂಡನ್ನೇ ಕೊಟ್ಟವಳಪ್ಪಾ ನಾನು… ನಿನಗೆ ಐವತ್ತು ರುಪಾಯಿ ಕೊಡಲ್ಲ ಅಂತೀನಾ ಅಂತಂದು ದುಡ್ಡು ಕೊಟ್ಟು ಟಿಕೆಟ್ ತಗೊಂಡೆ… ಅದೇ ಕೊನೆ… ಮತ್ಯಾವತ್ತೂ ನಾನು ಯಾವ ಟೋಲ್ನಲ್ಲೂ ನನ್ನ ಗಂಡನ ಅಶೋಕ ಚಕ್ರದ ಕಾರ್ಡ್ ತೋರೀಸಲಿಲ್ಲ ಅಂದರು’

ಯಾಕೋ ಕಣ್ಣೀರು ತಡೆಯಲೇ ಇಲ್ಲ… ಕ್ಯಾಮರಾಮ್ಯಾನ್ಗೆ ಶೂಟಿಂಗ್ ನಿಲ್ಲಿಸು ಅಂತಂದುಬಿಟ್ಟೆ… ಕೆಲವು ನಿಮಿಷ ಬೇಕಾದವು ಯಥಾಸ್ಥಿತಿಗೆ ಬರೋದಕ್ಕೆ…

’ನಿಮ್ಮ ಗಂಡ ಒಂದು ನಿಯತ್ತಿಲ್ಲದ ಸಮಾಜಕ್ಕಾಗಿ ಬಡಿದಾಡಿ ಸತ್ತು ಹೋದರು ಅಂತ ಈ ಐದು ವರ್ಷಗಳಲ್ಲಿ ಯಾವತ್ತಾದರೂ ಅನ್ನಿಸಿದೆಯಾ..?’ ಮ್ಲಾನವಾಗಿ ಕೇಳಿದೆ…

ಸ್ಮೀತಾರ ಕಣ್ಣಿನಲ್ಲಿ ನೀರಿನ ಪರದೆ… ಅವರು ಸ್ಮೀತಾ ಸಲಾಸ್ಕರ್… ಐದು ವರ್ಷಗಳ ಹಿಂದೆ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಎನ್ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಾಸ್ಕರ್ ಹೆಂಡತಿ… ನಿನ್ನೆ ಮಧ್ಯಾಹ್ನ ಅವರ ಸಂದರ್ಶನ ಮಾಡಿ, 26/11ಗೆ ಸಂಬಂಧಿಸಿದ ಇನ್ನೊಂದಷ್ಟು ಕೆಲಸ ಮುಗಿಸಿ ರಾತ್ರಿ ಬೆಂಗಳೂರು ತಲುಪಿದೆ. ಇವತ್ತು ಬೆಳಿಗ್ಗೆ ಆಫೀಸು… ಏನ್ ಮಾಡೋದಕ್ಕೆ ಹೋದರೂ, ಸ್ಮೀತಾ ಸಲಾಸ್ಕರರ ಆ ಧ್ವನಿ ಬೆನ್ನತ್ತಿ ನರುತ್ತಿದೆ ಅನ್ನೋ ಭಾವ…

’ಈ ದೇಶಕ್ಕಾಗಿ ಗಂಡನನ್ನೇ ಕೊಟ್ಟವಳಪ್ಪಾ ನಾನು… ನಿನಗೆ ಐವತ್ತು ರುಪಾಯಿ ಕೊಡಲ್ಲ ಅಂತೀನಾ..?’

Forwarded as received….
[11/12 9:29 AM] ‪+91 94486 65959‬: ಜಪದಿಂದ ಮನಸ್ಸಿಗೆ ವ್ಯಾಯಾಮ ಮತ್ತು ಶಾಂತಿ…

“ಜಪ” ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ಧರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ. ಜಪ ಎಂಬ ಪದವು “ಜಪಿಸು” ಎನ್ನುವ ಪದದಿಂದ ಮೂಡಿ ಬಂದಿದೆ ಎಂದರೆ ತಪ್ಪಾಗಲಾರದು.

“ಜಪ” ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಈ ರೀತಿ ಅರ್ಥ ಬರುತ್ತದೆ. ಅದನ್ನು ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ

“ಜ” ಕಾರೋ ಜನ್ಮ ವಿಚ್ಚೇದನ
“ಪ” ಕಾರೋ ಪಾಪನಾಶಕl
ತಸ್ಮಾಜ್ಯಪ ಇತಿಪ್ರೊಕ್ತೋ
ಜನ್ಮ ಪಾಪ ವಿನಾಶಕll

“ಜ”ಕಾರವು ಜನ್ಮ ವಿನಾಶಕವಾದದ್ದೆಂದೂ “ಪ” ಕಾರವು ಪಾಪಗಳನ್ನು ನಾಶ ಮಾಡುವುದೆಂದೂ, ಜನ್ಮ ಪವಿತ್ರವಾಗ ಬೇಕಾದರೆ “ಜಪ” ಅವಶ್ಯಕವೆಂದಾಗುತ್ತದೆ.

“ಜಪ” ಅಂದರೇನು? ಎಂಬ ಜಿಜ್ಞಾಸೆ ಉಂಟಾಗುತ್ತದೆ. ಅದನ್ನು ಈ ರೀತಿ ಅರ್ಥೈಸ ಬಹುದು. ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸಿನಲ್ಲಿ ಧ್ಯಾನಿಸುವುದೇ “ಜಪ”. ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಿಗೂ ಬೀಳುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೊರಕುತ್ತದೆ. ಜಪಿಸುವ “ಬೀಜ” ಮಂತ್ರವಾಗಲೀ, “ತಾರಕ” ಮಂತ್ರವನ್ನಾಗಲೀ, ಅಥವಾ ಇಷ್ಟ ದೇವತಾ ಮಂತ್ರವನ್ನಾಗಲೀ, ಗುರುಗಳಿಂದ, ಜ್ಞಾನಿಗಳಿಂದ ಅಥವಾ ಹಿರಿಯರಿಂದ ಉಪದೇಶ ಪಡೆಯ ಬೇಕೆಂಬ ನಿಯಮವಿದೆ.

“ಜಪ”ದಲ್ಲಿ ಮೂರು ವಿಧಾನಗಳಿವೆ. ಅವುಗಳೆಂದರೆ: 🔹ವಾಚಕ 🔹ಉಪಾಂಶು 🔹ಮಾನಸೀ ಜಪ.
ವಾಚಕ: ಬೇರೆಯವರ ಕಿವಿಗೆ ಬೀಳುವಂತೆ ಪಠಿಸುವುದು.
ಉಪಾಂಶು:ತುಟಿಗಳು ಅಲುಗುತ್ತಿದ್ದರೂ ಶಬ್ದವು ಹೊರಗೆ ಬಾರದಂತಿರುವುದು.
ಮಾನಸಿಕ ಜಪ: ಮನಸ್ಸಿನಲ್ಲಿ ಧ್ಯಾನಿಸುವುದು.
ವಾಚಕ ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು ಉಪಾಂಶು. ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು, ಮಾನಸಿಕ ಜಪ. ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ. ಇದನ್ನು “ಮೌನ”ವೆಂದು ಕರೆಯಲಾಗುತ್ತದೆ.

ಜಪವನ್ನು ಉಪದೇಶಿಸುವವನನ್ನು “ಗುರು” ಎಂದು ಕರೆಯಲಾಗುತ್ತದೆ. ಗುರು ಎಂಬ ಶಬ್ದಕ್ಕೆ ಅರ್ಥ ಹೀಗಿದೆ “ಗು” ಎಂದರೆ ಕತ್ತಲು ಅಜ್ಞಾನವೆಂದಾಗುತ್ತದೆ. (ಗುಹೆ ಕತ್ತಲು ಪ್ರದೇಶ) “ರು” ಎಂದರೆ ಅದನ್ನು ಪರಿಹರಿಸುವವನು ಎಂದಾಗುತ್ತದೆ. ಗುರು ಉಪದೇಶ ಮಾಡುವುದರ ಜೊತೆಗೆ ಆಶೀರ್ವಾದವನ್ನೂ ಮಾಡುತ್ತಾನೆ. ಶಿಷ್ಯನಿಗೆ ಗುರುವಿನ ಆಶೀರ್ವಾದವೇ ಮುಖ್ಯ ಉಪದೇಶಕ್ಕೆ ದಾರಿ.

ಗುರುವು ಉಪದೇಶ ಮಾಡುವ ಮಂತ್ರವು, 🔸ಏಕಾಕ್ಷರಿ🔸ದ್ವೈಕ್ಷರಿ 🔸ಪಂಚಾಕ್ಷರಿ🔸ಅಷ್ಟಾಕ್ಷರಿ 🔸ದಶಾಕ್ಷರಿ🔸ಪಂಚ ದಶಾಕ್ಷರಿ 🔸ಶೋಡಶಾಕ್ಷರಿ. ಇವುಗಳಲ್ಲಿ ಯಾವುದೇ ಇರ ಬಹುದು. ಇವುಗಳಲ್ಲೆವೂ ಭಗವಂತನನ್ನು ಸ್ತುತಿಸುವುದೇ ಆಗಿದೆ.

ಜಪ ಮಾಡುವವರು ಕೈನಲ್ಲಿ ಜಪಮಾಲೆಯನ್ನು ಹಿಡಿದು ಜಪ ಮಾಡುವುದನ್ನು ಕಾಣ ಬಹುದು. ಜಪಮಾಲೆಯಲ್ಲಿ ನೂರ ಎಂಟು ಮಣಿಗಳಿರುತ್ತವೆ ಈ ಮಣಿಗಳನ್ನು ತುಳಸಿ ಗಿಡದ ಕಾಂಡದಿಂದ ಮಾಡಲಾಗುತ್ತದೆ, ಇಲ್ಲವೆ ಚಿಕ್ಕ ರುದ್ರಾಕ್ಷಿಗಳನ್ನು ಪೋಣಿಸಿ ತಯಾರಿಸಲಾಗುತ್ತದೆ. ಕೆಲವರು (ಮುಸಲ್ಮಾನರು ಮತ್ತು ಕ್ರೈಸ್ತರು) ಗಾಜಿನ ಮಣಿಗಳಿಂದ ತಯಾರಿಸಿದ ಜಪಮಣಿಗಳನ್ನು ಉಪಯೋಗಿಸುತ್ತಾರೆ.

ಜಪಸರದಲ್ಲಿ ೧೦೮ ಮಣಿಗಳಿರ ಬೇಕೆಂಬ ನಿಯಮವಿದೆ. ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಅಷ್ಟೋತ್ತರ ಅತ್ಯಂತ ಗೌರವವನ್ನು ಹೊಂದಿರುವ ಸಂಖ್ಯೆ. ಭಗವಂತನಿಗೆ ಅಷ್ಟೋತ್ತರ ಪೂಜೆ ಅತ್ಯಂತ ಪ್ರಿಯವಾದುದ್ದು. ಈ ಪೂಜೆಯಲ್ಲಿ ಭಗವಂತನನ್ನು ೧೦೮ ರೀತಿಯಲ್ಲಿ ಸ್ತುತಿಸಿ ಪೂಜಿಸಲಾಗುತ್ತದೆ.

ಜಪದಲ್ಲಿ ವಿಧಗಳಿವೆ.
🔶ನಿತ್ಯ ಜಪ
🔶ವೈಯಕ್ತಿಕ ಜಪ
🔶ಪ್ರಾಯಶ್ಚಿತ್ತ ಜಪ
🔶ಅಚಲ ಜಪ
🔶ಜಲ ಜಪ
🔶ಅಖಂಡ ಜಪ
🔶ಪ್ರದಕ್ಷಿಣ ಜಪ
🔶ಲಿಖಿತ ಜಪ
🔶ಕಾಮ್ಯ ಜಪ

ಈ ಜಪಗಳು ಪ್ರತಿಯೊಂದೂ ವಿಶೇಷ ಅರ್ಥದಿಂದ ಕೂಡಿದ್ದು ಆಯಾ ಸಂಧರ್ಭಗಳಲ್ಲಿ ಪಠಿಸಲಾಗುತ್ತದೆ.

ಜಪವನ್ನು ಮಾಡುವುದಕ್ಕೆ ಕೆಲವು ನಿಯಮ ನಿಬಂಧನೆಗಳಿವೆ. ಅವುಗಳೆಂದರೆ, ಜಪವನ್ನು
ಮಾಡುವ ಸ್ಥಳವು ಪರಿಶುದ್ಧವಾಗಿಯೂ, ಶಾಂತ ವಾತಾವರಣದಿಂದ ಕೂಡಿರ ಬೇಕು. ಬರೀ ನೆಲದ ಮೇಲೆ ಕೂತು ಜಪ ಮಾಡ ಬಾರದು. ಮರದ ಮಣೆ ಅಥವಾ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗದಿಂದ ಮುಕ್ತನಾಗಿ ಏಕ ಮನಸ್ಸಿನಿಂದ ಜಪಿಸ ಬೇಕು.

ಪ್ರಾತಃಕಾಲ ಎದ್ದ ನಂತರ ಮುಖ ತೊಳೆದು ಏನನ್ನೂ ಸೇವಿಸದೆ ಕೊನೆಯ ಪಕ್ಷ ಒಂದು ಸುತ್ತು (೧೦೮) ಜಪ ಮಾಡ ಬೇಕು. ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳನ್ನು ಮಾತ್ರ ಉಪಯೋಗಿಸ ಬೇಕು. ತೋರು ಬೆರಳು ಅಹಂಕಾರ ಸೂಚಕವೆಂದು ಪರಿಗಣಿಸಿ ಅದನ್ನು ಕೈಬಿಡಲಾಗಿದೆ. ಮಾಡುವ ಜಪವನ್ನು ಲೆಕ್ಕ ಮಾಡಿ ಕೊಳ್ಳ ಬೇಕು.

ಅಸಂಖ್ಯಾ ಮಸುರಂ ಯಸ್ಮಾತ್l
ತಸ್ಮಾದತೆ ಗಣೀಯತೆ ದೈವಂll

ಎಂಬುದಾಗಿ ತಿಳಿಸಲಾಗಿದೆ. ಇದರ ಅರ್ಥವೆಂದರೆ ಲೆಕ್ಕವಿಲ್ಲದ ಜಪ ಅಸುರ (ರಾಕ್ಷಸ) ಜಪವೆಂದು ಪರಿಗಣಿಸಲ್ಪಡುತ್ತದೆ. ಆದ್ದರಿಂದ ಮಾಡುವ ಜಪಕ್ಕೆ ಲೆಕ್ಕವಿರ ಬೇಕು.

ಪ್ರತಿ ನಿತ್ಯವೂ ಜಪ ಮಾಡುವುದರಿಂದ ಅನೇಕ ಅನುಕೂಲತೆಗಳಿವೆ. ಈ ವಿಷಯವನ್ನು ಅನುಭವಿಗಳು ಈ ರೀತಿ ತಿಳಿಸಿದ್ದಾರೆ.

ವಿಷಯ ವಸ್ತುಗಳತ್ತ ಹರಿದಾಡುವ ಮಾನಸಿಕ ಚಿಂತನೆಗಳನ್ನು ನಿಯಂತ್ರಿಸುತ್ತದೆ. ಮನಸ್ಸನ್ನು ಭಗವಂತನ ಕಡೆಗೆ ವಂತೆ ಮಾಡುವುದೇ ಅಲ್ಲದೆ ದುಷ್ಕಾರ‍್ಯಗಳನ್ನು ಮಾಡದಂತೆ ತಡೆ ಹಿಡಿಯುತ್ತದೆ. ಮನಸ್ಸಿಗೆ ಶಾಂತಿ ತರುತ್ತದೆ. ಜಪಿಸುವ ಪ್ರತಿ ಮಂತ್ರದಲ್ಲಿಯೂ ಚೈತನ್ಯ ಶಕ್ತಿ ಅಡಗಿದ್ದು, ಸಾಧಕನ ಶಕ್ತಿ ಕುಂದಿದಾಗ ಮಂತ್ರಶಕ್ತಿ ಸಾಧನಾ ಶಕ್ತಿಯಾಗಿ ನಿಂತು ಸಾಧಕನಿಗೆ ಹುರಿದುಂಬಿಸುತ್ತದೆ. ರಜೋ ಗುಣವನ್ನು ಸತ್ವ ಗುಣವನ್ನಾಗಿ ಪರಿವರ್ತಿಸುತ್ತದೆ. ವ್ಯಾಯಾಮದಿಂದ ಶರೀರವು ದೃಢವಾಗಿ ಆರೋಗ್ಯವನ್ನು ಹೊಂದುವಂತೆ, ಜಪದಿಂದ ಮನಸ್ಸಿಗೆ ವ್ಯಾಯಾಮ ದೊರೆತು ಸ್ಥಿರವಾದ ಮನಸ್ಸನ್ನು ಪಡೆಯಲು ಸಹಾಯಕವಾಗುತ್ತದೆ. ಸ್ಥಿರ ಚಿತ್ತದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಆದರೆ ತೋರಿಕೆಗಾಗಿ ಮಾಡುವ ಜಪದಿಂದ ಯಾವುದೇ ಪುಣ್ಯ, ಪುರುಷಾರ್ಥವಾಗಲೀ ದೊರಕುವುದಿಲ್ಲ.

ಜಪ, ತಪ, ಧ್ಯಾನ, ಭಜನೆ, ನರ್ತನ, ಗಾನ, ಇವುಗಳೆಲ್ಲವೂ ಜಪದ ನಾನಾ ಮುಖಗಳು, ಅನುಸರಿಸುವ ರೀತಿ ಬೇರೆ ಬೇರೆಯಾಗಿವೆ.

ಎಲ್ಲಾ ನದಿಗಳೂ ಸಮುದ್ರವನ್ನು ಸೇರುವಂತೆ, ಪೂಜಿಸುವ ಪೂಜೆಗಳು, ಸಲ್ಲಿಸುವ ಪ್ರಾರ್ಥನೆಗಳು, ಯಾವುದೇ ಭಾಷೆಯಲ್ಲಿರಲಿ, ಹೆಸರಿನಿಂದಿರಲಿ, ಎಲ್ಲವೂ ಸರ್ವಶಕ್ತನಾದ ಭಗವಂತನಿಗೇ ಸಲ್ಲುತ್ತದೆ.

ಓಂ ಶಾಂತಿ ಶಾಂತಿ ಶಾಂತಿಃ
[11/12 9:41 AM] ‪+91 94486 65959‬: ಬಾಳೆ ಎಲೆ ಊಟದಿಂದ ಕೇವಲ ಹೊಟ್ಟೆ ತುಂಬುವುದೊಂದೇ ಅಲ್ಲ. ಈ ಎಲೆಯಲ್ಲಿ ಅನೇಕ ಆರೋಗ್ಯದ ಗುಟ್ಟುಗಳಿವೆ. ಮುಖ್ಯವಾದ 6 ಲಾಭಗಳು ಇಲ್ಲಿವೆ.1) ಬಾಳೆ ಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಲೋಕ್ಯಾಟೆಚಿನ್ ಗ್ಯಾಲೆಟ್ಎಂಬ ಪಾಲಿಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರದ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.2) ಬಾಳೆ ಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ. ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಫ್ರೀ ರಾಡಿಕಲ್ (Free radicals) ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ.3) ಚೆನ್ನೈನ ಆಯುರ್ವೇದ ತಜ್ಞರ ಪ್ರಕಾರ ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆ ಇದ್ದವರು ನಿತ್ಯ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದಂತೆ.4) ನೀವು ತಟ್ಟೆಗಳಲ್ಲಿ ಊಟ ಮಾಡಿದರೆಅವುಗಳಲ್ಲಿ ಮಾರ್ಜಕದ ಕಣಗಳು ನಿಮ್ಮಹೊಟ್ಟೆ ಸೇರಬಹುದು. ಆದರೆ, ಬಾಳೆ ಎಲೆಯಲ್ಲಿ ಈ ಸಮಸ್ಯೆಯೇ ಇರುವುದಿಲ್ಲ.5) ಬಾಳೆ ಎಲೆ ಊಟ ಆರೋಗ್ಯಕ್ಕೆ ತಂಪು.ಗ್ಯಾಸ್ ಅಡುಗೆಯಿಂದ ಆಹಾರವನ್ನು ಸೇರಿಕೊಳ್ಳುವ ಕೃತಕ ಉಷ್ಣವೂ ಇಲ್ಲಿತಣ್ಣಗಾಗುತ್ತದೆ.6) ಬಾಳೆ ಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ‘ಡಿ’ ಶೇಖರಣೆಗೊಂಡಿರುತ್ತದೆ. ಹೀಗಾಗಿ ಹಸುಗೂಸುಗಳನ್ನು ಶುಂಠಿ ಎಣ್ಣೆಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಹಿಡಿಯುತ್ತಾರೆ. ಭವಿಷ್ಯದಲ್ಲಿ ಚರ್ಮರೋಗಗಳು ಬಾರದಂತೆ ತಡೆಯುವ ವೈದ್ಯೋದ್ದೇಶ ಇದರದ್ದು. ತೆಂಗಿನೆಣ್ಣೆ ಲೇಪಿತ ಬಾಳೆ ಎಲೆಯನ್ನು ಸುಕ್ಕಾಗಿರುವ ಚರ್ಮದ ಸುತ್ತ ಸುತ್ತಿದರೆ ಕೆಲವೇ ದಿನಗಳಲ್ಲಿ ಒಳ್ಳೆಯ ರಿಸಲ್ಟ್ ಸಿಗುತ್ತದೆ.
[11/12 9:41 AM] ‪+91 94486 65959‬: 🌞🌞ಮನಸಿನ ಮಾತು🌞🌞

ಆತ್ಮೀಯರೆ…….,

ನಮ್ಮ ಬದುಕಿನಲ್ಲಿ ಹುದ್ದೆ,
ಉದ್ಯೋಗ ಕಂಡುಕೊಂಡ್ಮೇಲೆ,
ನೂರೆಂಟು ಆಶೆ-ಆಕಾಂಕ್ಷೆಗಳನ್ನು ಕಟ್ಟಿಕೊಳ್ಳುತ್ತೇವೆ.
ಕೆಲಸ ಮಾಡುತ್ತಾ,ಮಾಡುತ್ತಾ ನಾವು ಮಾಡುವ ಕೆಲಸ ಸಣ್ಣದಾಗುತ್ತದೆ.
ಬೇರೆಯವರು ಮಾಡುವ ಹುದ್ದೆ ಶ್ರೇಷ್ಠ ಎನಿಸಲು ಮನಸಿನಲಿ ಲೆಕ್ಕ ಹಾಕುತ್ತಿರುತ್ತೇವೆ ಅಲ್ವಾ…?

ಒಂದು ಕಥೆ ನೆನಪಾಗುತ್ತೆ.

ಸುಂದರವಾದ ಎತ್ತರದ ಮರದ ಕೆಳಗೆ ಪಚ್ಚನೆಯ ಹಸಿರು ತುಂಬಿದ ಹುಲ್ಲು ಅಲ್ಲಿ ಎರಡು ಇಲಿಗಳು ಮರದ ಬೇರನ್ನು ಕಡಿಯುತ್ತಾ ಇರುವಾಗ ಅಲ್ಲಿಯೇ ಬೆಕ್ಕು ಬರುವುದನ್ನು ಕಂಡು ಅಂಜಿ ಇಲಿಯು ನಾನು ಬೆಕ್ಕಾಗಿದ್ದರೆ ಯಾರಿಗೆ ಅಂಜದೇ ಆರಾಮವಾಗಿ ಇರಬಹುದಲ್ಲಾ ಎಂದು ಮನದಲಿ ಬಗೆಯುತ್ತಿರುವಾಗ ಬೆಕ್ಕಾಗಿ ಮಾರ್ಪಟ್ಟಿತು.
ಬೆಕ್ಕಾಗಿ ಆರಾಮವಾಗಿ ಇದ್ದರೆ ಆಯ್ತು ಎನ್ನುವಷ್ಟರಲ್ಲಿ ನಾಯಿ ಅಟ್ಟಿಸಿಕೊಂಡು ಬರುತ್ತದೆ. ನಾನು ನಾಯಿ ಆಗಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದಾಗ ನಾಯಿ ಆಯಿತು, ಖುಷಿಯಾಯಿತು.
ಆನೆಯು ನಾಯಿಯನ್ನು ಬೆನ್ನಟ್ಟಿಕೊಂಡು ಬಂದಾಗ ಆನೆಯಾಗಿದ್ದರೆ ಚೆನ್ನ ಎಂದಿತು ಮರುಕ್ಷಣವೇ ಆನೆ ಆಯಿತು,ನನ್ನಷ್ಟು ಬಲಶಾಲಿ ಯಾರು ಇಲ್ಲ ನನ್ನನ್ನೂ ಯಾರು ಕೊಲ್ಲಲಾರರು ಎಂದು ಗರ್ವದಿಂದ ಹೆಮ್ಮೆ ಪಟ್ಟಿತು.
ಸಿಂಹವು ಆನೆಯನ್ನು ಬೆನ್ನಟ್ಟಿ ಕೊಂಡು ತಿನ್ನಲು ಬಂದಾಗ ಅಯ್ಯೋ! ನಾನು ಸಿಂಹವು ಆಗಿದ್ದರೆ ಚೆನ್ನಾಗಿರತ್ತಿತ್ತು ಎಂದಾಕ್ಷಣ ಸಿಂಹವಾಯಿತು,

ನಾನೇ ಕಾಡಿನ ರಾಜ ನನ್ನನ್ನೂ ಯಾರು ಏನು ಮಾಡಲಾರರು ಎಂದು ಆನಂದ ಪಟ್ಟಿತು. ಬೇಟೆಗಾರ ಬಿಲ್ಲು ಬಾಣ ತೆಗಿದುಕೊಂಡು ಬೆನ್ನಟ್ಟಿಕೊಂಡು ಬಂದಾಗ ಓಡಲು ಪ್ರಾರಂಭಿಸಿತು,
ಅಯ್ಯೋ ಬೇಟಗಾರನಾದರೆ ಚೆನ್ನಾಗಿರುತ್ತಿತ್ತು ಎಂದುಕೊಂಡಾಕ್ಷಣ ಬೇಟಾರನಾಗಿ ಮಾರ್ಪಟ್ಟಿತು.
ಬೇಟೆಗಾರನಾದ ಮೇಲೆ ಬೇಟೆ ಆಡಲು ಕಾಡೆಲ್ಲ ಸುತ್ತಿ,ಸುತ್ತಿ ಸುಸ್ತು ಆದರೂ, ಒಂದು ಪ್ರಾಣಿಯು ಸಿಗಲೇ ಇಲ್ಲ. ತೃಷೆಯಾಗಿ,
ಆಯಾಸಗೊಂಡು ಎತ್ತರವಾದ ಸುಂದರವಾದ ಮರದ ಕೆಳಗೆ ಕುಂತು ವಿಶ್ರಾಂತಿ ಪಡೆಯುತ್ತಿರು
ವಾಗ, ಎಷ್ಟು ಕಷ್ಟದ ಜೀವನ
ಇದು ಎಂದು, ಮೇಲೆ ನೋಡಿದಾಗ,
ಸುಂದರವಾದ ಮರ ಕಾಣಿಸುತ್ತದೆ,
ಮರವಾದರೆ ಬೇಟೆ ಆಡುವುದು,
ಹೊಟ್ಟೆ ತುಂಬಿಸಿಕೊಳ್ಳುವ ಕಷ್ಟ ತಪ್ಪುತ್ತದೆ ಎಂದು ವಿಚಾರ ಮಾಡಿ,
ಮರವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದಾಕ್ಷಣ ಮರವಾಯಿತು.
ನಾನು ಇನ್ಮುಂದೆ ಆರಾಮವಾಗಿ ಜೀವಿಸಬಹುವುದು,ಜೀವದ ಭಯ,ಯಾರ ಹೆದರಿಕೆಯೂ ಇಲ್ಲ ಎಂದು ಖುಷಿಪಟ್ಟು ಕೆಳಗಡೆ ನೋಡುತ್ತಿರುವಾಗ ಇಲಿಗಳು ಮರದ ಬೇರುಗಳನ್ನು ಕಡಿಯುತ್ತಿದ್ದವು.
ಅಯ್ಯೋ..! ನನ್ನ ಬೇರುಗಳನ್ನು ಕಡಿದರೆ ನಾನು ನೆಲಕ್ಕೆ ಉರುಳಿ,ಒಣ ಕಟ್ಟಿಗೆಯಾಗಿ ಗೆದ್ದಲು ಹಿಡಿದು ಸತ್ತೋಗುತ್ತೇನೆ ಎಂದು ರೋದಿಸಿ ನಾನು ಇಲಿ ಆಗಿದ್ದರೆ ಚೆನ್ನಾಗಿರುತ್ತಿತ್ತು ಎಂದಾಕ್ಷಣ ಇಲಿ ಆಯಾಯಿತು. ಆ ಇಲಿಗೆ
ನಿದ್ದೆಯಿಂದ ಎಚ್ಚರವಾಯಿತು.
ಕನಸಿನಿಂದ ಹೊರಬಂದು ಯಾವುದೂ ಶ್ರೇಷ್ಠ ಅಲ್ಲ ನನ್ನ ಬದುಕು,ನನ್ನ ವೃತ್ತಿಯೇ ಶ್ರೇಷ್ಠ
ಎಂದು, ಅರಿವಾಯಿತು.

ಆದ್ದರಿಂದ ನಾವೂ ಕೂಡಾ ಇರುವ ವೃತ್ತಿಯಲ್ಲಿ ತೃಪ್ತಿ ಪಡದೇ ಡಿ.ಸಿ. ಆಗಬೇಕು,ತಹಶೀಲ್ದಾರ ಆಗಬೇಕು, ಇನ್ನೇನೋ ಅಧಿಕಾರಿ ಆಗಬೇಕು ಅದು ಶ್ರೇಷ್ಠ. ಆಗ ಆರಾಮವಾಗಿರುತ್ತೇವೆ,
ನನ್ನ ವೃತ್ತಿ ,ನನ್ನ ಜೀವನ ಸರಿಯಿಲ್ಲ ಎಂದು ಮರುಕು ದಃಖ ಪಟ್ಟರೇ “ಇಲಿಯ” ಕನಸಿನಂತೆ ಅಲ್ವಾ..?

ಇದ್ದ ಬದುಕು, ವೃತ್ತಿಯಲ್ಲಿಯೇ ತೃಪ್ತಿ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳೋಣ.

ನಮ್ಮ ಬದುಕು, ನಮ್ಮ ವೃತ್ತಿಯೇ ಶ್ರೇಷ್ಠ ಎಂದು ಸಾರೋಣ.

ಈ ಪ್ರಪಂಚಕ್ಕೆ ನಾವು ಬಂದಿರುವುದು ನಾವು ಕಟ್ಟಿಕೊಂಡ ಬದುಕಿನಲ್ಲಿ ಸಂತೋಷದಿಂದ ಬದುಕುವುದಕ್ಕೆ .
ಇಲ್ಲ ಸಲ್ಲದ ಆಸೆಗಳಿಂದ ನಗು ಮತ್ತು ಸಂತೋಷವನ್ನೇ ಮರೆತು ಹೋಗಿದ್ದೇವೆ.
ಯಾರನ್ನು ನೋಡಿದರೂ ಗಂಟು ಮುಖ, ಮುಖದಲ್ಲಿ ದುಗುಡತೆ.

ಬೇಡ ಸ್ನೇಹಿತರೇ ನಾವೇನು ಈ ಭೂಮಿ ಮೇಲೆ ಸಾವಿರ ವರ್ಷ ಇರಲ್ಲ .

ನಗುವೇ ಜೀವನ.
ನಗುವಂತಹ ಸನ್ನಿವೇಶ ಬಂದರೆ ಬಾಯ್ತುಂಬಾ
ನಗ್ರೀ.

ನಗಿಸಿರಿ.

ನಗ್ನಗ್ತಾ ಇರಿ……..,

🌴🌴HAPPY LIFE🌴🌴
[11/12 9:41 AM] ‪+91 94486 65959‬: ಮನುಷ್ಯತ್ವದ ಬಗ್ಗೆ ನಿಮಗೇನು ಅಚ್ಚರಿ ಹುಟ್ಟಿಸುತ್ತದೆ ಎಂದು ದಲಾಯಿ ಲಾಮರನ್ನು ವಿಚಾರಿಸಿದಾಗ ಅವರು ಉತ್ತರಿಸಿದ್ದು ಹೀಗೆ: “ಮನುಷ್ಯನು ಸಂಪತ್ತು ಗಳಿಸಲು ಆರೋಗ್ಯವನ್ನು ತ್ಯಾಗಮಾಡುತ್ತಾನೆ,ನಂತರ ಆರೋಗ್ಯವನ್ನು ಗಳಿಸಲು ಸಂಪತ್ತನ್ನು ತ್ಯಾಗಮಾಡುತ್ತಾನೆ.ಆಮೇಲೆ ತನ್ನ ಭವಿಷ್ಯತ್ತಿನ ಬಗ್ಗೆ ಎಷ್ಟು ಚಿಂತಾಪರನಾಗುತ್ತಾನೆಂದರ ವರ್ತಮಾನವನ್ನು ಅನುಭವಿಸುವುದನ್ನೇ ಮರೆತುಬಿಡುತ್ತಾನೆ.ಇದರ ಪರಿಣಾಮ ಸ್ವರೂಪವಾಗಿ ಮನುಷ್ಯ ತನ್ನ ವರ್ತಮಾನ ಮತ್ತು ಭವಿಷತ್ತನ್ನು ಅನುಭವಿಸಲಾರದೆ ತನಗೆ ಸಾವೇ ಇಲ್ಲದಂತೆ ವರ್ತಿಸಿ ಕೊನೆಗೆ ಏನನ್ನೂ ಸಾಧಿಸದೆ ಮರಣವನ್ನಪ್ಪುತ್ತಾನೆ.”
[11/12 9:41 AM] ‪+91 94486 65959‬: 💠ಬೆಳಿಗ್ಗೆ ಎದ್ದ ಕೂಡಲೇ ಕೈಗಳನ್ನು ನೋಡುತ್ತಾ ಹೇಳುವ ಮಂತ್ರ:

♦ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೆ ಸರಸ್ವತಿl
ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂll

💠ಬೆಳಿಗ್ಗೆ ಎದ್ದ ಕೂಡಲೇ ನೆಲ ಮುಟ್ಟುವಾಗ ಹೇಳುವ ಮಂತ್ರ:

♦ಸಮುದ್ರ ವಸನೆ ದೇವಿ ಪರ್ವತ ಸ್ತನಮಂಡಲೆl
ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆll

💠ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ ಹೇಳುವ ಮಂತ್ರ:

♦ ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

💠ಮಂತ್ರ ಸ್ನಾನ:

♦ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾl
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭಂತರ ಶುಚಿಃll

💠 ಪ್ರದಕ್ಷಿಣೆ ನಮಸ್ಕಾರ ಹೇಳುವ ಮಂತ್ರ:

♦ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚl
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇಪದೇll

♦ ತ್ವಮೇವ ಮಾತಾಚl ಪಿತಾ ತ್ವಮೇವl ತ್ವಮೇವ ಬಂಧುl ಸಖಾ ತ್ವಮೇವl ತ್ವಮೇವ ವಿದ್ಯಾಶ್ಚl ದ್ರವಿಣಂ ತ್ವಮೇವl ತ್ವಮೇವ ಸರ್ವಂ ಮಮ ದೇವ ದೇವll

💠ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ:

♦ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll

♦ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇಬರೇl
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll

💠ಸಂಕಷ್ಟದಲ್ಲಿರುವಾಗ ಪ್ರಾರ್ಥನೆ:

♦ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯಚl
ಋತುಪರ್ಣಸ್ಯ ರಾಜರ್ಷೆ ಕೀರ್ತನಂ ಕಲಿ ನಾಶನಂll

💠ಕ್ಷಮಾಪಣೆಗೆ ಹೇಳುವ ಮಂತ್ರ:

♦ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂl
ದಾಸೋ ಆಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರll

♦ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃl
ತ್ರಾಹಿಮಾಂ ಕೃಪಯಾ ದೇವಶರಣಾಗತ ವತ್ಸಲll

♦ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮl
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃll

💠 ಲೋಕ ಕಲ್ಯಾಣಕ್ಕೆ ಹೇಳುವ ಮಂತ್ರ:

♦ಸ್ವಸ್ತಿ ಪ್ರಜಾಭ್ಯ ಪರಿಪಾಲಯಂತಾಂl ನ್ಯಾಯೇನ ಮಾರ್ಗೆನ ಮಹೀಂ ಮಹೇಶಃl
ಗೋಬ್ರಾಹ್ಮಣೇಭ್ಯೊ ಶುಭಮಸ್ತು ನಿತ್ಯಂl
ಲೋಕಾ ಸಮಸ್ತ ಸುಖಿನೋ ಭವಂತು

💠 ಆರತಿ ತೆಗೆದು ಕೊಳ್ಳುವಾಗ ಹೇಳುವ ಮಂತ್ರ:

♦ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರೀಯಂ ಬಲಂl ಆಯುಷ್ಯಂ ತೇಜಃ ಆರೋಗ್ಯಂ ದೇಹಿ ಮೇ ಹವ್ಯವಾಹನll

💠 ಜ್ಯೋತಿ ಬೆಳಗುವಾಗ ಹೇಳುವ ಮಂತ್ರ:

♦ದೀಪಂ ಜ್ಯೋತಿ ಪರಬ್ರಹ್ಮ ದೀಪೇನ ಸರ್ವತಮೋಪಃl
ದೀಪೇನ ಸಾಧ್ಯತೇ ದೀಪಂ ಸಂಧ್ಯಾ ದೀಪಂ ನಮೋಸ್ತುತೇll

💠 ಶುಭ ಪ್ರಯಾಣಕ್ಕೆ ಹೇಳುವ ಮಂತ್ರ:

♦ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚl
ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃll

💠ಚಿರಂಜೀವಿಗಳ ಸ್ಮರಿಸುವಿಕೆ:

♦ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃl
ಕೃಪಃ ಪರುಶುರಾಮಚ ಸಪ್ತೈತೆ   ಚಿರಜೀವಿನಃll

💠ಮಾತಾ ಪಿತೃಗಳ ಸ್ಮರಣೆ:

♦ಮಾತೃ ದೇವೊ ಭವಃl ಪಿತೃ ದೇವೋ ಭವಃl ಆಚಾರ್ಯ ದೇವೋ ಭವಃl ಅತಿಥಿ ದೇವೋ ಭವಃl

💠 ಸರ್ಪ ಭಯಕ್ಕೆ ಹೇಳುವ ಮಂತ್ರ:

♦ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ
ಶಂಖಪಾಲಂ ದೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ

💠 ಅಶ್ವತ್ಥ ಪ್ರದಕ್ಷಿಣೆ ಸ್ತೋತ್ರ:

♦ಮೂಲತೋ ಬ್ರಹ್ಮರೂಪಾಯl ಮಧ್ಯತೋ ವಿಷ್ಣುರೂಪಿಣೇl ಅಗ್ರತಃ ಶಿವರೂಪಾಯl ಅಶ್ವತ್ಥಾಯ ನಮೋ ನಮಃll

💠 ಶಾಂತಿ ಮಂತ್ರಗಳು:

♦ಓಂ ಅಸತೋಮಾ ಸದ್ಗಮಯl ತಮಸೋಮಾ ಜ್ಯೋತಿರ್ಗಮಯl
ಮೃತ್ಯೋರ್ಮಾ ಅಮೃತಂಗಮಯಾll
ಓಂ ಶಾಂತಿಃ ಶಾಂತಿಃ ಶಾಂತಿಃ

♦ಓಂ ಸಹನಾವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈl
ತೇಜಸ್ವಿನಾವದೀತಮಸ್ತು ಮಾವಿದ್ವಿಶಾವಹೈll
ಓಂ ಶಾಂತಿಃ ಶಾಂತಿಃ ಶಾಂತಿಃ

💠ಮಲಗುವಾಗ ಹೇಳುವ ಮಂತ್ರ:

♦ರಾಮಂ ಸ್ಕಂದಂ ಹನೂಮನ್ತಂ ವೈನತೇಯಂ ವೃಕೋದರಂlkoko

ಶಯನೇಯಃ ಸ್ಮರೇನಿತ್ಯಂ ದುಸ್ವಪ್ನಂ ತಸ್ಯ ನಸ್ಯತಿಃll

ದಿನ ಬೆಳಿಗ್ಗೆ ಮತ್ತು ರಾತ್ರಿ ಊಟದ ನಂತರ ಪಠಿಸಿ, ನಿಮ್ಮ ದಿನಚರಿಯಲ್ಲಿ, ಆರೋಗ್ಯದಲ್ಲಿ ವ್ಯತ್ಯಾಸವನ್ನು ಗಮನಿಸಿ.
[11/12 9:41 AM] ‪+91 94486 65959‬: ಪಕ್ವತೆ ಉನ್ನತಿಯ ಲಕ್ಷಣ

ಒಮ್ಮೆ ಒಬ್ಬ ರಾಜ ಬೇಟೆಯಾಡಲು ಹೊರಟ. ಕಾಡಿನಲ್ಲಿ ನುಗ್ಗಿದ. ಉತ್ಸಾಹದಲ್ಲಿ ತುಂಬ ದೂರ ಹೋದದ್ದೇ ತಿಳಿಯಲಿಲ್ಲ. ಸಾಯಂಕಾಲವಾಗುತ್ತ ಬಂದಿತು. ಹಸಿವೆ, ನೀರಡಿಕೆಗಳು ಬಾಧಿಸುತ್ತಿವೆ. ಮರಳಿ ಪಟ್ಟಣಕ್ಕೆ ಹೋಗಬೇಕಾದರೆ ದಾರಿ ತಿಳಿಯುತ್ತಿಲ್ಲ.

ಅಷ್ಟರಲ್ಲಿ ರಾಜನನ್ನು ಹುಡುಕಿಕೊಂಡು ಸೈನಿಕನೊಬ್ಬ ಬಂದ. ಇಬ್ಬರೂ ಮುಂದೆ ಬರುವಾಗ ಮಂತ್ರಿಯೂ ಸೇರಿಕೊಂಡ. ಮೂವರೂ ಸೇರಿ ತಮ್ಮ ಪಟ್ಟಣದ ಮಾರ್ಗ ಅರಸುತ್ತಿದ್ದರು. ಕೊನೆಗೆ ಕಾಡಿನ ಕೊನೆಗೆ ಬಂದು ಒಂದು ಪುಟ್ಟ ಹಳ್ಳಿ ಪ್ರವೇಶಿಸಿದರು. ದಾರಿಯನ್ನು ಕೇಳಲು ಮೂವರೂ ಮೂರು ದಿಕ್ಕಿಗೆ ನಡೆದರು.

ರಾಜನಿಗೆ ಒಂದು ದಾರಿ ಸಿಕ್ಕಿತು, ಆದರೆ ದಾರಿಯಲ್ಲಿ ಯಾರೂ ಇರಲಿಲ್ಲ. ಮುಂದೆ ರಸ್ತೆ ಎರಡು ಭಾಗವಾಗುತ್ತಿತ್ತು. ಆ ಸ್ಥಳದಲ್ಲೇ ಮರದ ಕೆಳಗೆ ಒಬ್ಬ ಸನ್ಯಾಸಿ ಕುಳಿತಿದ್ದ. ಅವನನ್ನು ನೋಡಿದರೆ ಪೂರ್ಣ ಅಂಧನಂತೆ ತೋರುತ್ತಿತ್ತು. ರಾಜ ಹೋಗಿ, `ಪೂಜ್ಯ ಸನ್ಯಾಸಿಗಳೇ ವಂದನೆಗಳು. ನಾನು ದಾರಿ ತಪ್ಪಿಸಿಕೊಂಡಿದ್ದೇನೆ.

ನನಗೆ ಪಟ್ಟಣ ಸೇರಬೇಕಾಗಿದೆ. ಮುಂದಿರುವ ಎರಡು ದಾರಿಗಳಲ್ಲಿ ಯಾವುದು ಸರಿ ಎಂದು ಮಾರ್ಗದರ್ಶನ ನೀಡಬಲ್ಲಿರಾ` ಎಂದು ಕೇಳಿದ. ಆಗ ಅಂಧ ಸನ್ಯಾಸಿ, `ದಯವಿಟ್ಟು ಎಡಗಡೆಯ ರಸ್ತೆಯಲ್ಲೇ ಹೋಗಿ ಅದು ನಿಮ್ಮನ್ನು ಪಟ್ಟಣಕ್ಕೇ ತಲುಪಿಸುತ್ತದೆ` ಎಂದ. ಮಂತ್ರಿಯೂ ಅಲ್ಲಲ್ಲಿ ತಿರುಗಾಡಿ ಮತ್ತೆ ಅಲ್ಲಿಗೇ ಬಂದ. ಅವನೂ ಸನ್ಯಾಸಿಯನ್ನು ಅದೇ ಪ್ರಶ್ನೆ ಕೇಳಿ ಅದೇ ಉತ್ತರ ಪಡೆದುಕೊಂಡ.

ಆದರೆ ಸನ್ಯಾಸಿ ದಾರಿ ತೋರುವಾಗ, `ಇದೇ ತಾನೇ ತಮ್ಮ ರಾಜರು ಹೀಗೆಯೇ ಹೋದರು` ಎಂದ. ಕೆಲ ಸಮಯದ ನಂತರ ಸೈನಿಕ ಅಲ್ಲಿಗೇ ಬಂದ. ಸನ್ಯಾಸಿಯನ್ನು ದಾರಿ ಕೇಳಿದ. ಆಗ ಸನ್ಯಾಸಿ `ಹೌದಪ್ಪ, ಎಡಗಡೆಯ ದಾರಿಯನ್ನೇ ಹಿಡಿದು ಹೋಗು. ಅದೇ ಮಾರ್ಗವಾಗಿ ಇದೀಗ ನಿಮ್ಮ ರಾಜರು ಮತ್ತು ಮಂತ್ರಿಗಳು ಹೋಗಿದ್ದಾರೆ` ಎಂದ.

ನಂತರ ಮೂವರೂ ದಾರಿಯಲ್ಲಿ ಸೇರಿಕೊಂಡಾಗ ಸನ್ಯಾಸಿ ಮಾರ್ಗದರ್ಶನ ಮಾಡಿದ ವಿಷಯ ಚರ್ಚೆಗೆ ಬಂತು. ರಾಜನಿಗೆ ಒಂದು ಸಂದೇಹ ಬಂತು. ತಾನು ಸನ್ಯಾಸಿಯನ್ನು ಕೇವಲ ದಾರಿ ಕೇಳಿದೆನೇ ಹೊರತು ತನ್ನ ಪರಿಚಯ ಮಾಡಿಕೊಂಡಿರಲಿಲ್ಲ. ಆದರೂ ತಾನು ರಾಜ ಎಂದು ಅವನಿಗೆ ಹೇಗೆ ಗೊತ್ತಾಯಿತು. ಹಾಗಾದರೆ ಆತ ಅಂಧತ್ವದ ನಾಟಕ ಮಾಡುತ್ತಿದ್ದಾನೆಯೇ. ಮಂತ್ರಿಗೂ, ಸೈನಿಕನಿಗೂ ಇದೇ ಪ್ರಶ್ನೆ ಬಂದಿತು.

ಮೂವರೂ ಮರಳಿ ಸನ್ಯಾಸಿಯ ಕಡೆಗೆ ನಡೆದರು. ಆತ ನಿಜವಾಗಿಯೂ ಅಂಧನೇ. ನಮ್ಮ ಪರಿಚಯ ತಮಗೆ ಹೇಗೆ ಆಯಿತು ಎಂದು ಕೇಳಿದಾಗ ಆತ ಹೇಳಿದ, `ತಾವು ದಾರಿ ಕೇಳುವಾಗ ಪೂಜ್ಯ ಸನ್ಯಾಸಿಗಳೇ ಎಂದು ಕರೆದಿರಿ. ತಮ್ಮ ಧ್ವನಿಯಲ್ಲಿದ್ದ ವಿನಯ, ಗಾಂಭೀರ್ಯ ತಾವು ರಾಜರೇ ಇರಬೇಕೆಂದು ತಿಳಿಸಿತು.

ನಂತರ ಬಂದ ಮಂತ್ರಿಗಳು ಸಾಧುಗಳೇ ಎಂದು ಕರೆದರು. ಆಮೇಲೆ ಬಂದ ಸೈನಿಕ ಏ ಕುರುಡ ಬಾಬಾ ಎಂದು ಕೂಗಿದ. ನೀವು ಮೂವರೂ ಬಳಸಿದ ಭಾಷೆ ಮತ್ತು ಧ್ವನಿಯಿಂದ ನಿಮ್ಮ ಸ್ಥಾನಗಳನ್ನು ಊಹಿಸಿದೆ`. ಯಾವಾಗಲೂ ನಮ್ಮ ನಾಲಿಗೆ ನಮ್ಮ ಮಟ್ಟ ಸಾರುತ್ತದೆ. ಅಂತೆಯೇ ಉನ್ನತಸ್ಥಾನಕ್ಕೇರಿದವರು ತಮ್ಮ ಭಾಷೆಯನ್ನೂ, ಧ್ವನಿಯನ್ನು ಮೃದುಗೊಳಿಸಿಕೊಳ್ಳಬೇಕು. ಮೃದುತ್ವ ಪರಿಪಕ್ವವಾದದ್ದರ ಲಕ್ಷಣ.

ಮರ ಎತ್ತರವಾದಷ್ಟೂ ಬಾಗುತ್ತದೆ, ಹಣ್ಣು ತುಂಬಿದ ಮರವೂ ಬಾಗುತ್ತದೆ. ಒಗರು, ಹುಳಿಯಾಗಿದ್ದ ಬಿರುಸು ಕಾಯಿ ಮಾಗಿದ ಹಾಗೆ ಮೃದುವಾಗಿ, ಸಿಹಿಯಾಗುತ್ತದೆ. ಈ ಪಕ್ವತೆಯೇ ಉನ್ನತಿಯ ಲಕ್ಷಣ.
[11/12 9:42 AM] ‪+91 94486 65959‬: ಮನಸಿನ ಮಾತು..

ನಾನು ಕೋಪದಿಂದ ಮನೆ ಬಿಟ್ಟು ಬಂದೆ. ಎಷ್ಟು ಕೋಪ ಬಂದಿತ್ತೆಂದರೆ ಅಪ್ಪನ ಶೂ ಹಾಕ್ಕೊಂಡು ಬಂದಿರುವುದು ಕೂಡ ಗೊತ್ತಾಗಲಿಲ್ಲ. ಮಗನಿಗೆ ಒಂದು ಬೈಕ್ ಕೊಡಿಸಲಾಗದವರು ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವುದು ಯಾಕೆ….?

ನಾನು ದೊಡ್ಡ ವ್ಯಕ್ತಿಯಾಗುವವರೆಗೂ ಮತ್ತೆ ಮನೆ ಹೋಗುವುದಿಲ್ಲ….
ನನಗೆ ಎಷ್ಟು ಕೋಪ ಬಂದಿದೆಯೆಂದರೆ ಎಂದೂ ಮುಟ್ಟದ ಅಪ್ಪನ ಪಾರ್ಸ್’ನ್ನು ತಗೊಂಡುಬಂದೆ. ಅಮ್ಮನಿಗೆ ಕೂಡ ಗೊತ್ತಿಲ್ಲದ ಲೆಕ್ಕಗಳೆಲ್ಲ ಅದರಲ್ಲಿ ಇವೆ. ಇಂದು ಅವೆಲ್ಲವೂ ನನಗೆ ಗೊತ್ತಾಯಿತು.

ನಡೆಯುತ್ತಿದ್ದರೆ ಬೂಟ್’ಗಳಲ್ಲಿ ಏನೋ ಚುಚ್ಚಿದ ಹಾಗೆ ಆಗುತ್ತಿದೆ. ಅದರೂ ನನ್ನ ಕೋಪ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಬೂಟ್’ಗಳ ಒಳಗೆ ಒದ್ದೆಯಾಗ ಅನುಭವವಾಯಿತು. ಎತ್ತಿ ನೋಡಿದೆ ಬೂಟ್’ಗಳ ತಳದಲ್ಲಿ ರಂಧ್ರಗಳಾಗಿವೆ. ಹಾಗೆ ಕುಂಟುತ್ತ ಬಸ್ ನಿಲ್ದಾಣಕ್ಕೆ ಬಂದೆ.

ಒಂದು ಗಂಟೆ ತನಕ ಯಾವುದೇ ಬಸ್ಸು ಇಲ್ಲ ಎಂದು ತಿಳಿಯಿತು. ಸರಿ ಏನು ಮಾಡುವುದು. ಅಪ್ಪನ ಪಾರ್ಸ್’ನಲ್ಲಿ ಏನೇನು ಇದೆ ನೋಡೋಣ ಎಂದು ತೆಗೆದೆ. ಆಫೀಸಿನಲ್ಲಿ 40,000 ಸಾಲ ತೆಗೆದುಕೊಂಡ ರಶೀದಿ, Laptop ಬಿಲ್ಲು. ಆ Laptop ನನ್ನ ಟೇಬಲ್ ಮೇಲಿದೆ. ಅಂದರೆ ನನಗಾಗಿ ಕೊಡಿಸಿದ್ದು.

ಮತ್ತೆ ಅದರಲ್ಲಿ ಆಫೀಸ್’ಗೆ ಒಳ್ಳೆಯ ಬೂಟ್’ಗಳನ್ನು ಹಾಕಿಕೊಂಡು ಬರುವಂತೆ ಮೇನೇಜರ್ ಕೊಟ್ಟ ನೋಟೀಸ್ ಲೇಟರ್. ಹೌದು ಅಮ್ಮ ನಾಲ್ಕು ತಿಂಗಳಿಂದ ಹೇಳುತ್ತಿದ್ದರು ಹೊಸ ಶೂ ತೆಗೆದುಕೊಳ್ಳಿ ಎಂದು. ಅಪ್ಪ ಇನ್ನೂ ಆರು ತಿಂಗಳು ಬರುತ್ತವೆ ಎನ್ನುತ್ತಿದ್ದ.

‘ನಮ್ಮ ಈ Exchange ಮೇಳದಲ್ಲಿ ಹಳೆಯ ಸ್ಕೂಟರ್ ಕೊಟ್ಟು ಹೊಸ ಬೈಕ್ ಪಡೆಯಿರಿ’ ಎಂಬ ಭಿತ್ತಿಪತ್ರ ಕಾಣಿಸಿತ್ತು.

ಹೌದು! ನಾನು ಮನೆ ಬಿಟ್ಟು ಬರುವಾಗ ಅಪ್ಪನ ಸ್ಕೂಟಾರ್ ಕಾಣಿಸುತ್ತಿಲ್ಲವಲ್ಲ….?

ನನ್ನ ಕಣ್ಣುಗಳು ಒದ್ದೆಯಾದವು. ತಕ್ಷಣವೇ ಮನೆ ಕಡೆ ಓಡತೊಡಗಿದೆ…..

ಈಗ ಬೂಟ್’ಗಳಿಂದ ನೋವಾಗುತ್ತಿಲ್ಲ….

ಮನೆಯಲ್ಲಿ ಅಪ್ಪ ಇಲ್ಲ… ಸ್ಕೂಟರ್ ಇಲ್ಲ… ನನಗೆ ಅರ್ಥವಾಯಿತು. ತಕ್ಷಣ Exchange ಆಪರ್ ನೀಡುವ ಸ್ಥಳಕ್ಕೆ ಓಡಿಬಂದೆ. ಅಪ್ಪ ಅಲ್ಲಿದ್ದಾರೆ….!

ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡು ಜೋರಾಗಿ ಅಳಲು ಆರಂಭಿಸಿದೆ….!

” ಬೇಡ ಅಪ್ಪ…! ನನಗೆ ಬೈಕ್ ಬೇಡ….!!ಅಂದೆ

ಆವಾಗ್ಲೆ ಗೊತ್ತಾಗಿದ್ದು ಹೆತ್ತವರ ನೋವು,ಕಷ್ಟ,ಪ್ರೀತಿ ಎಂತದ್ದು ಅಂತ.

ನಾವು ಪ್ರೀತಿಸಬೇಕಾಗಿದ್ದು ಇಷ್ಟ ಪಡಬೇಕಾಗಿದ್ದು ಶೋಕಿ ತರುವಂತ ವಸ್ತುಗಳನ್ನಲ್ಲ
ನಮ್ಮ ಜೀವನವನ್ನ ಶೋಬಿಸುವ ಹೆತ್ತವರನ್ನ.

ಇದ್ದಾಗ ಕಡೆಗಣಿಸಿ ಸತ್ತಾಗ ಅತ್ತರೆ ಮತ್ತೆ ಹುಟ್ಟಿ ಬರುವವರೇ ಹೆತ್ತವರು.
ಯೋಚನೆ ಮಾಡಿ ಮಿತ್ರರೆ……..🙏🏼
[11/12 10:14 AM] Umakka: ಸ್ನೇಹಿತರೆಂದರೆ ಹೀಗೆ ಇರಬೇಕು ?

ಎಲ್ಲರಿಗೂ ಇರಲೇಬೇಕಾದ 3 ಬಗೆಯ ಸ್ನೇಹಿತರು

ಬಂಧುಬಾಂಧವರಿಗಿಂತ ಸ್ನೇಹಿತರೇ ಉತ್ತಮ ಎಂಬ ಮಾತುಗಳನ್ನ ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಆದರೆ, ಎಲ್ಲಾ ಸ್ನೇಹಿತರೂ ನಮ್ಮ ಹಿತಕ್ಕೆ ಧಾವಿಸುವುದಿಲ್ಲ. ನಮಗೆ ತುಂಬಾ ಬೇಕಾಗುವ ಮೂರು ಬಗೆಯ ಸ್ನೇಹಿತರು ಯಾರು..?

1) ಏನು ಬೇಕಾದರೂ ಮಾಡುತ್ತಾರೆ..
ಕೆಲ ಅಪರೂಪದ ಸ್ನೇಹಿತರು ಇರುತ್ತಾರೆ. ಸ್ನೇಹಿತರಿಗೆ ಸಹಾಯ ಮಾಡಲು ಇವರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಸ್ನೇಹಿತರ ಸಣ್ಣಪುಟ್ಟ ಸಮಸ್ಯೆಗಳಿಗೂ ಇವರು ಸ್ಪಂದಿಸುತ್ತಾರೆ. ತಮಗೆ ಕೈಲಾಗಿದ ಸಹಾಯ ಇವರು ಮಾಡಿಯೇ ತೀರುತ್ತಾರೆ. ಇಂಥ ಸ್ನೇಹಿತರನ್ನ ಹೊಂದಿದವರು ನೆಮ್ಮದಿಯಿಂದ ಇದ್ದೇ ಇರುತ್ತಾರೆ.

2) ಸಂತೈಸುವ ಸ್ನೇಹಿತ..!
ಯಾವುದೇ ವ್ಯಕ್ತಿಯಾದರೂ ಕಷ್ಟಗಳು, ದುಃಖ ದುಮ್ಮಾನಗಳು ತಪ್ಪುವುದಿಲ್ಲ. ದಾರಿ ಕಾಣದೇ ಒದ್ದಾಡುವ ಸಂದರ್ಭದಲ್ಲಿ ಕೆಲ ಸ್ನೇಹಿತರು ಕಾರ್ಮೋಡಗಳನ್ನ ಸರಿಸಿ ನಿಜ ದಾರಿಗಳನ್ನ ತೋರಿಸುತ್ತಾರೆ. ಸ್ನೇಹಿತರಿಗೆ ಪ್ರೇರಣೆ ನೀಡಿ ಮುನ್ನಡೆಯುವಂತೆ ಮಾಡುತ್ತಾರೆ. ದುಃಖಿತ ಸ್ನೇಹಿತರನ್ನ ತೋಳಲ್ಲಿಟ್ಟುಕೊಂಡು ಸಂತೈಸುತ್ತಾರೆ.

3) ನಗಿಸುತ್ತಾರೆ…!
ಮೂಡ್ ಆಗಿದ್ದರೆ ಕೆಲ ಸ್ನೇಹಿತರು ಹಾಸ್ಯ ಚಟಾಕಿ ಸಿಡಿಸಿ ವಾತಾವರಣವನ್ನ ತಿಳಿಗೊಳಿಸುತ್ತಾರೆ. ಖಿನ್ನತೆಯ ಛಾಯೆ ದೂರವಾಗಿ ಮನಸು ನಳನಳಿಸುವಂತೆ ಮಾಡುತ್ತಾರೆ.

ನನ್ನ ಪ್ರಾಣ ಸ್ನೇಹಿತ‌

ಉದಯ ರವಿ ಕಿರಣಗಳ೦ತೆ; ಇರುಳಿನ ಚ೦ದ್ರನ ಬೆಳಕಿನ೦ತೆ

ಬೀಸೋ ಗಾಳಿಯ ತ೦ಪಿನ೦ತೆ; ಉಕ್ಕಿಹರಿಯುವ ಸಾಗರದ೦ತೆ

ಉರಿಯುವ ಬಿಸಿಲಿನ ಬೆ೦ಕಿಯ೦ತೆ; ಆದರೆ ಮನಸ್ಸು ಹಾಲಿನ೦ತೆ

ಓ ಗೆಳೆಯ! ನೀ ಬ೦ದೆ ಜೀವನದಲಿ.

ಮಮತೆ ತೊರುವ ತಾಯಿಯ೦ತೆ; ಪ್ರೇತಿ ತೋರುವ ತ೦ದೆಯ೦ತೆ

ಕಷ್ಠದಲಿ ಕಾಪಾಡುವ‌ ದೈವದ೦ತೆ; ಬೇಡಿದನ್ನು ನೀಡುವ ಕರ್ಣನ೦ತೆ

ಓ ಗೆಳೆಯಾ! ನಿನ್ನನ್ನು ಪಡೆದಿರುವ ನಾನೆಷ್ಟು ಪುಣ್ಯವ೦ತ‌

ಈಗ ನಾನೇ ಇಲ್ಲಿ ಸಿರಿವ೦ತ!

ಏನು ಪುಣ್ಯ ಮಾಡಿದೆನೂ ನಿನ್ನ ಪಡೆಯಲು ಈ ಜನುಮದಲಿ

ನೀನೇ ಹುಟ್ಟಿ ಬಾ! ಮರುಜನುಮಗಳಲಿ

ಎ೦ದೆ೦ದಿಗೂ ನೀ ತು೦ಬಿರುವೆ ಮನದಲಿ

ಶಾಶ್ವತವಾಗಿ ಉಳಿಯುವೆ ನನ್ನ ನೆನಪಲಿ.

ನಿಮ್ಮ ಪ್ರೀತಿಯ ಸ್ನೇಹಿತ

[15/12 9:50 AM] ‪+91 94486 65959‬:                     ಧಮ೯
ದೃತರಾಷ್ಟ್ರ ವಿದುರನಿಗೆ ಒಂದು ಕೇಳಿದ ಪ್ರಶ್ನೆ ಕೇಳುತ್ತಾನೆ, “ಧಮ೯ದ ಆಚರಣೆ  ಎಂದರೇನು? ಇದು ಇಂತಹವರಿಗೆ ಸಾಧ್ಯ?  ಯಾರಿಗೆ ಧರ್ಮಾತ್ಮ ಎನ್ನುತ್ತಾರೆ ? ”
ವಿದುರನಿಗೆ ಸ್ವಲ್ಪ ಆಶ್ಚರ್ಯವಾದರೂ ರಾಜನಿಗೆ ಸಮರ್ಥವಾಗಿ  ಉತ್ತರ ಹೇಳಲು ಮುಂದಾಗುತ್ತಾನೆ.
“ಮಹಾರಾಜ ,  ಧಮ೯ದ ಹಾದಿ ಎನ್ನುವುದು ಅತ್ಯಂತ ಕಷ್ಟದ ಹಾದಿ.   ಇದನ್ನು ಕೇಳುವುದಕ್ಕೆ ಹಿತವಾಗಿರುತ್ತದೆ,  ಅದನ್ನು ಪಾಲಿಸುವುದು ಬಹಳ ಕಷ್ಟ.  ಆದರೆ, ಇದು ಕೆಲವರಿಗೆ ಮಾತ್ರ ಸಾಧ್ಯ.
ಯಾರು ಲೌಕಿಕದಲ್ಲಿ  ಆಸಕ್ತಿಗಳನ್ನು ಕ್ಷಣಿಕವೇ೦ದು ಭಾವಿಸುತ್ತಾರೋ, ಯಾರು ತನ್ನ ಕತ೯ವ್ಯಕ್ಕೆ ಯಾವುದೇ ಪ್ರತಿಫಲಗಳನ್ನು ನಿರೀಕ್ಷಿಸುವುದಿಲ್ಲವೋ, ಯಾರು ಪರಿಸ್ಥಿತಿ ಮತ್ತು ಸ೦ಧಭ೯ಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವುದಿಲ್ಲವೋ,  ಯಾರು ಕ್ಷಣಿಕ
ವಸ್ತುಗಳಿಗೆ ಆಸೆಯನ್ನು  ಪಡುವುದಿಲ್ಲವೋ, ಯಾರು ತಾನು ಕಳೆದುಕೊ೦ಡುದುದಕ್ಕೆ ಯಾವುದೇ  ವ್ಯಥೆ ಪಡುವುದಿಲ್ಲವೋ, ಯಾರಿಗೆ ಎ೦ತಹ ಕಠಿಣ  ಪರಿಸ್ಥಿತಿ ಬಂದರು ಅದನ್ನು  ಸಮಥ೯ನಾಗಿ ಮೆಟ್ಟಿನಿಲ್ಲುವ  ಶಕ್ತಿಯನ್ನು ಹೊಂದಿರುತ್ತಾನೋ,
ಯಾರು ಎ೦ತಹ ಸ್ಥಿತಿಯಲ್ಲೂ ಕತ೯ವ್ಯ ವಿಮುಖನಾಗುವುದಿಲ್ಲವೋ, ಯಾರಿಗೆ ಇ೦ದ್ರಿಯಗಳ ಮೇಲೆ ನಿಗ್ರಹವಿರಿಸಿ ಕೊ೦ಡಿರುವವನೋ,  ಯಾರು  ಇಷ್ಟೆಲ್ಲಾ ಗುಣಗಳನ್ನು ಹೊಂದಿರುತ್ತಾರೋ   ಅಂತಹವರಿಗೆ  ಧರ್ಮ ಆಚರಿಸುವುದು ಸಾಧ್ಯ.”
ಅವನೇ ನಿಜವಾದ ಧಮಾ೯ತ್ಮ . ಇ೦ತಹ ಧರ್ಮಾತ್ಮನ  ಹೃದಯ ಸ್ಪಟಿಕದಷ್ಟೇ  ಪಾರದಶ೯ಕ.    ಆತನೊಳಗಿನ ಜ್ಞಾನವೇ ಅವನಿಗೆ ಮಾಗ೯ದಶಿ೯ ಗುರುವಾಗಿರುತ್ತಾನೆ ” .
Regards,

Prakash.H.N
9964827580
[15/12 9:50 AM] ‪+91 94486 65959‬: ಶ್ರೀವಾಣಿ-102

ವಸ್ತು ಎಲ್ಲಿಯವರೆಗೆ ಸೀಮಿತವಾಗಿರುತ್ತದೆ ಅಲ್ಲಿಯವರೆಗೆ ಆಧಾರ ಇರಬೇಕಲ್ಲ. ಎಲ್ಲ ಪದಾರ್ಥಗಳಿಗೆ ಭೂಮಿ ಆಧಾರ. ಆದರೆ ಭೂಮಿ ಆಂತರಿಕ್ಷದಲ್ಲಿ ತೇಲುತ್ತಾ ಇದೆ. ಈ ಭೂಮಿಯ ಚಲನೆಗೆ, ಅಸ್ತಿತ್ವಕ್ಕೆ ಆಧಾರ ಬೇಕಲ್ಲ! ಎಲ್ಲಾ ವಸ್ತುಗಳು ಆಕಾಶದಲ್ಲಿ ತೇಲುತ್ತಾ ಇವೆ. ಆಕಾಶ ಸರಿಸಿದರೆ ಎಲ್ಲಾ ನಿರಾಧಾರ ಆಗುತ್ತದೆ. ಇಂತಹ ಅವಕಾಶ, ಬಯಲು ಸರ್ವ ಪದಾರ್ಥಗಳ ಆಧಾರ.

ಭೌತಶಾಸ್ತ್ರಜ್ಞರು ಹೇಳುವ ಪ್ರಕಾರ ಆಕಾಶವೂ ಶಾಶ್ವತವಲ್ಲ! ಸ್ಟೀಪನ್ ಹಾಕಿನ್ ನಂತವರು ಒಂದು ಸಿದ್ಧಾಂತ ಮಂಡಿಸಿದ್ದಾರೆ. ಈ ಆಕಾಶ, ಪದಾರ್ಥಗಳು, ಭೂಮಿ ಇವು ಪ್ರತ್ಯೇಕ ಅಲ್ಲ. ಇವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇದರ ಅರ್ಥ ಇಷ್ಟೇ ಈ ಜಗತ್ತು ಮೊದಲು ಇರಲಿಲ್ಲ, ಕೊನೆಗೊಮ್ಮೆ ಮರೆಯಾಗುತ್ತದೆ. ಸಮಸ್ತ ಪದಾರ್ಥಗಳೆಲ್ಲಾ ಮರೆಯಾಗುತ್ತವೆ. ಎಲ್ಲಾ ಮರೆಯಾಗಿ ಉಳಿಯುತ್ತದೆಯಲ್ಲ ಅದು ಪರಮ ಸತ್ಯ. ಅದು ದೇವರು, ಪರಮ ಆಧಾರ.

ಯಾವುದು ಎಲ್ಲಾ ಪದಾರ್ಥಗಳಿಗೆ, ಜೀವಜಗತ್ತಿಗೆ ಆಧಾರವಾಗಿದೆಯೋ ಅದು ಪರಮ ಆಧಾರ. ಅದು ಮೂಲ ಅಸ್ತಿತ್ವ, ಅದು ಇಲ್ಲದಿದ್ದರೆ ನಾನು ಇಲ್ಲ, ನೀನು ಇಲ್ಲ, ಜಗತ್ತೇ ಇಲ್ಲ.

ಒಬ್ಬ ಕವಿ ಬರೆಯುತ್ತಾನೆ:

Who flies the kite?
I, said the boy.
I, said the wind.
I, said the string…because I am a thing I fly the kite…
I, said the tail… I make it sail…
All are right … All are wrong said the unknown voice.

ಒಂದು ಗಾಳಿಪಟ ಹೀಗೆ ಆಕಾಶದಲ್ಲಿ ಹಾರುತ್ತದೆ…
ಒಬ್ಬ ಮಹಾಶಯ ಕೇಳುತ್ತಾನೆ. ಯಾರು ಈ ಪಟವನ್ನು ಹಾರಿಸುತ್ತಿದ್ದಾರೆ.
ಹುಡುಗ ಹೇಳಿದ, ನಾನು ಹಾರಿಸುತ್ತಿದ್ದೇನೆ. ನನ್ನ ಆನಂದಕ್ಕೆ ನಾನು ಹಾರಿಸುತ್ತಿದ್ದೇನೆ.
ಗಾಳಿ ಹೇಳಿತು ನಾನು ಹಾರಿಸುತ್ತಿದ್ದೇನೆ. ನನ್ನ ಇಚ್ಛೆಯಂತೆ ಹಾರಿಸುತ್ತಿದ್ದೇನೆ.
ದಾರ ಹೇಳಿತು ನಾನು ಹಾರಿಸುತ್ತಿದ್ದೇನೆ.
ಪತಂಗದ ಬಾಲ ಹೇಳಿತು ನಾನು ಹಾರಿಸುತ್ತಿದ್ದೇನೆ. ನಾನಿಲ್ಲದಿದ್ದರೆ ಪಟ ಹಾರುತ್ತಿರಲಿಲ್ಲ.
ಆಗ ಒಂದು ವಾಣಿ ಹೇಳಿತು ಎಲ್ಲರೂ ಖರೇ ಹೇಳುತ್ತಿದ್ದಾರೆ. ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ.
ಎಷ್ಟು ಮಜ ಇದೆ.
ಹುಡಗನಿಗೆ ಹಾರಿಸಲು ಬರಲ್ಲ,
ಗಾಳಿಗೆ ಹಾರಿಸಲು ಬರಲ್ಲ,
ಬಾಲಕ್ಕೆ…
ದಾರಕ್ಕೆ…
ಹಾರಿಸಲು ಬರಲ್ಲ.

ಆದರೆ ಎಲ್ಲವನ್ನು ಹಾರಿಸುವ ಅದ್ಭುತ ಶಕ್ತಿ ಇದೆ. ಅದನ್ನು ಮರೆತು ಎಲ್ಲರೂ ಮಾತನಾಡುತ್ತಾರೆ.

ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು

 

When I heard the story of Gautam Buddha, my question was always about his wife and son that he left behind…this write-up by Vikram Bhattacharya touches that part of the story 😊
—————

He left her in the middle of the night, the night their son was
born. When she heard the news
she was devastated.

Yet, she did not complain but her
life lost all meaning. The only
reason for her to live now was
her son. She wanted him to grow
up to be a man that the world
would look up to.

Her friends and relatives came
around and asked her to forget
about the man who had left her
and start life again.

They asked her to marry again
but she refused. She was young
& beautiful & suitors queued up
outside her door, but she refused each one of them.

Then one fine day he came back !

He stood in front of her and she could hardly remember him as the man who had left her. “They call you the Buddha now?” she asked him gently.

“I hear they do,” he answered in
a calm fashion.

“What does it mean?” she further inquired.

“I think it means the enlightened one, a knower,” he informed.

She smiled and then a silence.
“I suppose we have both learned something. Your lessons O Buddha, will make the world richer in spirit, but my lesson will unfortunately remain largely unknown.”
she reflected deeply….

“ And what lesson is that ? ”
The Buddha probed.

Her eyes sparkled with unshed tears, “That a courageous woman does not need anyone to complete her…..
SHE IS COMPLETE ON HER OWN ”

Saluting womanhood for the Yashodhara spirit. !!! 🙏

 

[14/12 10:43 PM] ‪+91 94486 65959‬: ಗೆಳೆಯರೆ ಖಂಡಿತಾ ನಗ್ತಿರಿ ಓದಿ ಈ ಕಥೆನ…
¤¤¤¤¤¤¤¤¤¤¤¤¤¤¤¤

ಅಪ್ಪ ಮಗ ಕಟ್ಟಿಗೆ ತರಲು ಕಾಡಿಗೆ ಹೋದರು ………..
ಮಗ ಕಟ್ಟಿಗೆ ಕಡಿಯುವಾಗ ಕಾಲು ಜಾರಿ ನೀರಿಗೆ ಬಿದ್ದ……..
ತಂದೆ ದೇವರನ್ನು ಪ್ರಾರ್ಥಿಸಲು, ದೇವರು ಪ್ರತ್ಯೇಕ್ಷನಾಗಿ ಸಮಸ್ಯೆ ಅರಿತು ನೀರಿನಲ್ಲಿ ಮುಳುಗಿದ…
ಮುಳುಗಿದ್ದ ದೇವರು ಸಿದ್ರಾಮಯ್ಯನ ಎತ್ತಿಕೊಂಡು ಬಂದು ಇವನ ನಿನ್ನ ಮಗ ಎಂದು ಕೇಳಲು, ತಂದೆ ಹೌದು ಎಂದ.

ದೇವರು :ಅಂದು ಚಿನ್ನ ಬೆಳ್ಳಿ ಯ ಕೊಡಲಿಗಳನ್ನೆ ನನ್ನದಲ್ಲ ಎಂದೆ. ಇಂದು ಏನಾಯ್ತಪ್ಪ ನಿನ್ನ ನಿಯತ್ತು?

ತಂದೆ :ಅಂದು ಮೊದಲು ನೀನು ಚಿನ್ನದ ಕೊಡಲಿ ತಂದೆ ನಾ ನನ್ನದಲ್ಲ ಎಂದೆಳಲು ನಂತರ ಬೆಳ್ಳಿ ಕೊಡಲಿ ತಂದೆ ಕೊನೆಗೆ ನನ್ನ ಕೊಡಲಿ ತಂದು ಮೂರನ್ನು ನೀನೆ ಇಟ್ಟಿಕೊ ಎಂದೆ.

ಇಂದು ಮೊದಲು ಸಿದ್ರಾಮಯ್ಯನ ಎತ್ತಿಕೊಂಡು ಬಂದೆ.
ನಾನು ನನ್ನ ಮಗನಲ್ಲ ಎಂದಿದ್ದರೆ ನಂತರ ರಾಹುಲ್ ನ ಎತ್ತಿಕೊಂಡು ಬರುತ್ತಿದ್ದೆ ಆಗಲೂ ನನ್ನ ಮಗನಲ್ಲ ಎಂದಿದ್ದರೆ ಕೊನೆಗೆ ನನ್ನ ಮಗನೆತ್ತಿಕೊಂಡು ಬಂದು ಮೂರು ಜನರನ್ನು ನೀನೆ ಸಾಕಿಕೊ ಎನ್ನುತ್ತಿದ್ದೆ.

ದೇವರು : ಹೌದು. ಅದಕ್ಕೆ?

ತಂದೆ : ದೇವರೇ, ನಾನು ಬಡವ
ಒಬ್ಬ ಮುಟ್ಠಾಳನ ಸಾಕೊದೆ ಕಷ್ಟ ಮೂರು ಮೂರು ಜನ ಮುಟ್ಠಾಳರನ್ನು ಹೇಗೆ ಸಾಕಲಿ.😜😝😜😝
[14/12 10:43 PM] ‪+91 94486 65959‬: ಪ್ರೇಮಕಥೆ”

ಒಂದುದಿನ ಒಬ್ಬ ಸುಂದರ ಹುಡುಗ ಒಂದು ಹುಡುಗಿಯ ಮನೆಯ ಮುಂದೆ ತನ್ನ ಸೈಕಲ್ ನಿಲ್ಲಿಸಿಕೊಂಡಿದ್ದ. ಆ ಹುಡುಗಿ ಕಾಲೇಜಿಗೆ ಹೋದ ಬಳಿಕ ಆತ ತನ್ನ ಮನೆಗೆ ಹೋಗುತಿದ್ದ. ಇದುದಿನ ಹೀಗೆ ನಡೆಯುತಿತ್ತ್ತು. ಎಂದು ಆತ ಆ ಹುಡುಗಿಯೋಂದಿಗೆ ಮಾತಾಡಿರಲಿಲ್ಲ . ಅಕೆಯು ಪ್ರತಿ ದಿನವೂ ಆತನನ್ನು ಗಮನಿಸತ್ತಾ ಇದ್ದಳು. ಅವಳು ಗೇಟ್ ದಾಟಿ ಹೊರ ಬಂದಾಗ ಆತ ಅಕೆಯನ್ನು ಗಮನಿಸಿದೆ ಮೊಬೈಲ್ ನಲ್ಲಿ ಮುಳುಗಿದಂತೆ ನಟಿಸುತಿದ್ದ ಅವಳನ್ನು ಮಾತನಾಡಿಸುವ ಧೈರ್ಯ ಮಾಡಲೆ ಇಲ್ಲ. ಆ ಹುಡುಗಿಗೆ ಇದು ಇವನು ನನ್ನ ಲವ್ ಮಾಡ್ತ ಇರ್ಬೇಕು ಅಂತ ಅನ್ನಿಸಿತು. ಇವನ ದಿನಚರಿ ಹೀಗೆ ತಿಂಗಳುಗಳ ಕಾಲ ನಡೆಯುತ್ತಿರುವುದು ಗಮನಿಸಿದ ತಂದೆ ತಾಯಿ ಆ ಹುಡುಗಿಗೆ ಬೇರೆ ಹುಡುಗನ ಜೊತೆಗೆ ಮದುವೆ ಮಾಡಲು ನಿರ್ಧರಿಸದರು. ಆ ಹುಡುಗಿ ಈತನ ನಡತೆಯಿಂದ ಪ್ರಭಾವಿತಳಾಗಿ ಆ ಹುಡುಗನ ಪ್ರೇಮ ನಿವೇದನೆಗಾಗಿ ಕಾಯ್ತಾಳೆ. ಅದರೆ ಅವನು ಪ್ರಫೋಸ್ ಮಾಡದಿದ್ದಾಗ ಇನೊ ತಡಮಾಡಿದರೆ ತಂದೆತಾಯೆ ನನಗೆ ಬೇರೆ ಮದುವೆ ಮಾಡ್ತಾರಿ ಅಂತ ತಿಳಿದು ಅವಳೇ ಅತನ ಮುಂದೆ ನಿಂತು ಹೇಳುತ್ತಾಳೆ “ನೀನು ಇಷ್ಟು ದಿನಗಳ ಕಾಲ ನಮ್ಮ ಮನೆ ಮುಂದೆ ನಿಂತ್ತದ್ದು ಯಾಕೆ ಅಂತ ತಿಳಿಯಿತು. ನನ್ನ ಬರುವುದನ್ನು ಕಾದು ನಿನ್ನ ಪ್ರೀತಿಯನ್ನು ಹೇಳಿಕೊಳ್ಳದೆ ಹಾಗೆ ಹೋಗ್ತಾ ಇದ್ದೇ ಅಲ್ವ ಈಗ ನಿಜವಾಗಿ ಹೇಳ್ತಾ ಇದ್ದೇನೆ ಐ ಲವ್ ಯು ಕಣೋ. ನಾನು ನಿನ್ನ ತುಂಬಾ ಪ್ರೀತಿಸ್ತಾ ಇದ್ದೇನೆ. ” ಹುಡುಗ ಶಾಕ್ ಆಗಿ ಹೇಳಿದ “ಹಲೋ ಆ ಉದ್ದೇಶದಿಂದ ನಿಮ್ಮ ಮನೆ ಹತ್ತಿರ ನಿಂತಿದ್ದಲ್ಲ. ಇಲ್ಲಿ ವೈ-ಫೈ ಕನೆಕ್ಟ ಆಗುತ್ತೆ ಅದ್ಕೆ ನಿಲ್ತಿದ್ದೆ ಅಷ್ಟೇ ಓಕೆನಾ… ” ಎಂದಾಗ ಆಕೆ ತಿರುಗಿಯು ನೋಡದೆ ಸಾಗುತ್ತಾಳೆ. . . . . .. . .
💖💖💖💖💖💖
Simpallag ondu love story..😀😀

[15/12 6:52 PM] Umakka: रामायण कथा का एक अंश, जिससे हमे सीख मिलती है “एहसास” की…

श्री राम, लक्ष्मण एवम् सीता’ मैया चित्रकूट पर्वत की ओर जा रहे थे,
राह बहुत पथरीली और कंटीली थी !
की यकायक श्री राम के चरणों मे कांटा चुभ गया !

श्रीराम रूष्ट या क्रोधित नहीं हुए, बल्कि हाथ जोड़कर धरती माता से अनुरोध करने लगे !
बोले- “माँ, मेरी एक विनम्र प्रार्थना है आपसे, क्या आप स्वीकार करेंगी ?”

धरती बोली- “प्रभु प्रार्थना नहीं, आज्ञा दीजिए !”

प्रभु बोले, “माँ, मेरी बस यही विनती है कि जब भरत मेरी खोज मे इस पथ से गुज़रे, तो आप नरम हो जाना !
कूछ पल के लिए अपने आँचल के ये पत्थर और कांटे छूपा लेना !
मुझे कांटा चुभा सो चुभा, पर मेरे भरत के पाँव मे अघात मत करना”

श्री राम को यूँ व्यग्र देखकर धरा दंग रह गई !
पूछा- “भगवन, धृष्टता क्षमा हो ! पर क्या भरत आपसे अधिक सुकूमार है ?
जब आप इतनी सहजता से सब सहन कर गए, तो क्या कूमार भरत सहन नही कर पाँएगें ?
फिर उनको लेकर आपके चित मे ऐसी व्याकूलता क्यों ?”

श्री राम बोले- “नही…नही माते, आप मेरे कहने का अभिप्राय नही समझीं ! भरत को यदि कांटा चुभा, तो वह उसके पाँव को नही, उसके हृदय को विदीर्ण कर देगा !”

“हृदय विदीर्ण !! ऐसा क्यों प्रभु ?”,
धरती माँ जिज्ञासा भरे स्वर में बोलीं !

“अपनी पीड़ा से नहीं माँ, बल्कि यह सोचकर कि…इसी कंटीली राह से मेरे भैया राम गुज़रे होंगे और ये शूल उनके पगों मे भी चुभे होंगे !
मैया, मेरा भरत कल्पना मे भी मेरी पीड़ा सहन नहीं कर सकता, इसलिए उसकी उपस्थिति मे आप कमल पंखुड़ियों सी कोमल बन जाना..!!”

अर्थात
रिश्ते अंदरूनी एहसास, आत्मीय अनुभूति के दम पर ही टिकते हैं ।
जहाँ गहरी आत्मीयता नही, वो रिश्ता शायद नही परंतू दिखावा हो सकता है ।

इसीलिए कहा गया है कि…
रिश्ते खून से नहीं, परिवार से नही,
मित्रता से नही, व्यवहार से नही,
बल्कि…
सिर्फ और सिर्फ आत्मीय “एहसास” से ही बनते और निर्वहन किए जाते हैं ।
जहाँ एहसास ही नहीं,
आत्मीयता ही नहीं ..
वहाँ अपनापन कहाँ से आएगा ।
[15/12 10:07 PM] ‪+91 94486 65959‬: #ಶ್ರೀವಾಣಿ_147

ದೇವನು ಅಬಂಧಿತ:-
ಒಬ್ಬ ಆಗರ್ಭ ಸಿರಿವಂತ ಇದ್ದ. ಒಂದು ದಿನ ಆತನಿಗೆ ತನ್ನ ಸಂಪತ್ತಿನ ಬಲದಿಂದ ದೇವರನ್ನು ಹೇಗಾದರೂ ಬಂಧಿಸಬೇಕು ಎನಿಸಿತು. ಯಾರೋ ಹೇಳಿದರು- ‘ಹಾಗಾದರೆ ನೀನು ಒಂದು ಭವ್ಯವಾದ ಮಂದಿರವನ್ನು ಕಟ್ಟು. ಖಂಡಿತವಾಗಿಯೂ ದೇವರು ಅದರಲ್ಲಿ ತಾನಾಗಿಯೇ ಬಂದು ನೆಲೆಸುತ್ತಾನೆ.!’
ಸಿರಿವಂತನು ದೇಶ – ವಿದೇಶಗಳಿಂದ ಪ್ರಸಿದ್ಧ ಶಿಲ್ಪಿಗಳನ್ನು ಕರೆಯಿಸಿದ. ಹತ್ತಾರು ವರುಷ ಅವರೆಲ್ಲ ದುಡಿದು ಸುಪ್ರಸಿದ್ದ ಸುಂದರ ಮಂದಿರ ಕಟ್ಟಿದರು. ಒಂದು ದಿನ ಶುಭಮುಹೂರ್ತದಲ್ಲಿ ದೇವರ ಮೂರ್ತಿಯ ಪ್ರತಿಷ್ಠಾಪನೆಯು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ‘ದೇವರು ನನ್ನ ಮಂದಿರದಲ್ಲಿ ಬಂಧಿತನಾದ!’ ಎಂದು ಸಿರಿವಂತ ಭಾವಿಸಿದ. ಅದೇ ಸಂತಸದಲ್ಲಿ ಸಿರಿವಂತ ಮನೆಗೆ ಹೋಗಿ ಮಲಗಿದ. ಹತ್ತಿರದಲ್ಲಿಯೇ ಆತನ ಮೂಮ್ಮಗನೂ ಮಲಗಿದ್ದ.
“ನಮ್ಮಜ್ಜ ದೇವರನ್ನು ಮಂದಿರದಲ್ಲಿ ಕೂಡಿಹಾಕಿದ್ದಾನೆ. ಆತನನ್ನು ಮುಕ್ತಗೊಳಿಸಬೇಕು.” ಎಂದು ಬಾಲಕ ಚಿಂತಿಸಿದ. ನಿದ್ರೆ ಬರಲಿಲ್ಲ. ಮಧ್ಯರಾತ್ರಿಯಲ್ಲಿ ಬಾಲಕನು ಅಜ್ಜನ ಪಕ್ಕದಲ್ಲಿದ್ದ ಕೀಲಿಕೈ ತೆಗೆದುಕೊಂಡು ಮಂದಿರಕ್ಕೆ ಬಂದ. ದೊಡ್ಡ ದೇವರ ಗುಡಿಗೆ ದೊಡ್ಡ ಕೀಲಿಕೈ ಹಾಕಲಾಗಿತ್ತು. ಬಾಲಕನಿಗೆ ಅದು ನಿಲುಕಲಿಲ್ಲ. ಆದರೂ ಆತ ಬಾಗಿಲ ಕೀಲಿತೆಗೆಯಲು ಪ್ರಯತ್ನಿಸುತ್ತಿದ್ದ. ಅಷ್ಟರಲ್ಲಿ ಹಿಂದಿನಿಂದ ಯಾರೋ ಬಾಲಕನ ಬೆನ್ನು ಚಪ್ಪರಿಸಿ ಕೇಳಿದರು- “ಮಗು, ಏನು ಮಾಡುತ್ತಿರುವೆ ಈ ಮಧ್ಯರಾತ್ರಿಯಲ್ಲಿ ?” ಬಾಲಕ ಹೇಳಿದ – “ನಮ್ಮಜ್ಜ ಇಲ್ಲಿ ದೇವರನ್ನು ಬಂಧಿಸಿ ಬಿಟ್ಟಿದ್ದಾನೆ. ಆತನನ್ನು ಮುಕ್ತಗೊಳಿಸುತ್ತಿರುವೆ!” ಆ ವ್ಯಕ್ತಿ ಹೇಳಿದ – “ನಿಮ್ಮ ಅಜ್ಜನಿಗೆ ಎಲ್ಲೋ ಭ್ರಮೆಯಾಗಿದೆ. ದೇವರನ್ನು ಬಂಧಿಸುವ ಶಕ್ತಿ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ! ದೇವರು ಜಗದಗಲ, ಮುಗಿಲಗಲ, ಮಿಗೆಯಗಲ!……… ನಿತ್ಯಮುಕ್ತ!” ಈ ಮಾತನ್ನು ಕೇಳುತ್ತಲೇ ಬಾಲಕನಿಗೆ ಅಪಾರ ಹರ್ಷವಾಯಿತು! ಆ ಬಾಲಕನನ್ನು ಸಂತೈಸಿದವನು ಬೇರೆ ಯಾರೂ ಅಲ್ಲ ದಯಾಸಾಗರನಾದ ದೇವರೇ!
[15/12 10:07 PM] ‪+91 94486 65959‬: ಮಾನಿತ್ವ

—–ಅಂತರಂಗ—–

ಸ್ವಾಮೀ ಆದಿತ್ಯಾನಂದ ಸರಸ್ವತೀ
ಚಿನ್ಮಯ ಮಿಷನ್, ಮಂಡ್ಯ..

ನಮ್ಮ ಮನಸ್ಸು ಯಾವಾಗಲೂ ತಾನು ಎಲ್ಲರಿಗಿಂತ ಶ್ರೇಷ್ಠನಾಗಬೇಕು ಎಂಬಂತೆ ಬಯಸುತ್ತದೆ. ಇದನ್ನೇ ಶ್ರೀಕೃಷ್ಣ ಪರಮಾತ್ಮನು ಮಾನಿತ್ವವೆಂದು ಕರೆದಿದ್ದಾನೆ. ಈ ಮಾನಿತ್ವವು ನಮಗೆ ನಮ್ಮ ಭಾಷೆಯಲ್ಲಿ, ನಮ್ಮ ದೇಶದಲ್ಲಿ, ನಮ್ಮ ರೂಪದಲ್ಲಿ, ನಮ್ಮ ವಿದ್ಯೆಯಲ್ಲಿ, ನಮ್ಮ ಜಾತಿಯಲ್ಲಿ, ಕೆಲಸದಲ್ಲಿ ಹಾಗೂ ಇನ್ನೂ ಅನೇಕ ಕಡೆಗಳಲ್ಲಿ ಕಂಡುಬರುತ್ತದೆ. ಇದಕ್ಕೆ ಮೂಲಕಾರಣ ಸತ್ಯದ ಅರಿವು ನಮಗಿಲ್ಲದಿರುವುದು ಮತ್ತು ನಮ್ಮ ಅಜ್ಞಾನ. ನಾವು ಮನಸ್ಸನ್ನು ವಿಶಾಲಗೊಳಿಸುತ್ತ ಹೋದಂತೆ ನಮ್ಮ ಸಣ್ಣತನ ನಮ್ಮಿಂದ ದೂರವಾಗುತ್ತದೆ. ಒಂದು ವೇಳೆ ನಾವು ಹೀಗೆ ಮಾಡದಿದ್ದರೆ ನಮ್ಮ ಅಂತ್ಯಕ್ಕೆ ನಾವೇ ಬೀಜ ನೆಟ್ಟಂತಾಗುತ್ತದೆ. ಹಲವಾರು ಪುರಾಣ ಇತಿಹಾಸದಲ್ಲಿ ನಾವು ಈ ಸತ್ಯವನ್ನು ಕಂಡಿದ್ದೇವೆ.

ಪಾಂಡವರು ಮತ್ತು ಕೌರವರಿಗೆ ಗುರುಗಳು ದ್ರೋಣಾಚಾರ್ಯರು. ವಿದ್ಯಾಭ್ಯಾಸವಾದ ಮೇಲೆ ಗುರುದಕ್ಷಿಣೆಯನ್ನು ಸಮರ್ಪಿಸಲು ಅವರು ಬಂದಾಗ ಆಚಾರ್ಯರು ತಮ್ಮ ಹಾಗೂ ದ್ರುಪದನ ಸ್ನೇಹ ಹಾಗೂ ದ್ವೇಷದ ವೃತ್ತಾಂತವನ್ನು ತಿಳಿಸಿ, ದ್ರುಪದನನ್ನು ಯುದ್ಧದಲ್ಲಿ ಸೋಲಿಸಿ ತಮ್ಮ ಪಾದದಡಿಯಲ್ಲಿ ಬೀಳುವಂತೆ ಮಾಡಿದರೆ ಅದೇ ನಿಮ್ಮ ಗುರುದಕ್ಷಿಣೆ ಎನ್ನುತ್ತಾರೆ. ಅರ್ಜುನನು ಆಚಾರ್ಯರ ಆಸೆಯನ್ನು ಪೂರ್ಣಗೊಳಿಸುತ್ತಾನೆ. ಆಗ ದ್ರೋಣರು ದ್ರುಪದನಿಗೆ ‘ಈಗ ಪೂರ್ತಿ ರಾಜ್ಯ ನನ್ನದಾಯಿತು. ಆದರೂ ನೀನು ನನ್ನ ಮಿತ್ರ. ನಿನಗೆ ನನ್ನ ರಾಜ್ಯದಲ್ಲಿ ಅರ್ಧವನ್ನು ಕೊಡುತ್ತೇನೆ’ ಎಂದು ಹೇಳಿ ಆತನನ್ನು ಹಿಂದೆ ಕಳುಹಿಸುತ್ತಾರೆ.

ಅವಮಾನಗೊಂಡ ದ್ರುಪದ ಸುಮ್ಮನಿರದೆ ಒಂದು ಯಾಗವನ್ನು ಮಾಡಲು ಸಂಕಲ್ಪಿಸುತ್ತಾನೆ. ಆತನ ಆಸೆ ದ್ರೋಣನನ್ನು ಕೊಲ್ಲುವ ಒಬ್ಬ ಮಗ ಹಾಗೂ ಅರ್ಜುನನಿಗೆ ಕೊಟ್ಟು ವಿವಾಹ ಮಾಡಲು ಒಬ್ಬ ಮಗಳು ತನಗೆ ಜನಿಸಬೇಕು ಎಂಬುದಾಗಿರುತ್ತದೆ. ಯಾಗ ಫಲಪ್ರದವಾಗುತ್ತದೆ. ದ್ರುಪದ ತನ್ನ ಮಗನಾದ ಧೃಷ್ಟದ್ಯುಮ್ನನನ್ನು ದ್ರೋಣರ ಬಳಿಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸುತ್ತಾನೆ. ದ್ರುಪದನ ಮನಸ್ಸನ್ನು ಅರಿತಿದ್ದ ದ್ರೋಣರು ಆತನ ಮಗನಿಗೆ ವಿದ್ಯಾಭ್ಯಾಸ ನೀಡುತ್ತಾರೆ. ಆದರೆ ಕೊನೆಯಲ್ಲಿ ಶಿಷ್ಯನೇ ಕುರುಕ್ಷೇತ್ರದಲ್ಲಿ ಗುರುವನ್ನು ಸಂಹರಿಸುತ್ತಾನೆ.

ಇಲ್ಲಿ ನಾವು ಮಾನಿತ್ವದ ಉದಾಹರಣೆಯನ್ನು ಕಾಣುತ್ತೇವೆ. ದ್ರೋಣರಲ್ಲೂ ಮಾನಿತ್ವವು ಕಾಣುತ್ತದೆ ಹಾಗೂ ದ್ರುಪದನಲ್ಲೂ ಇದು ಸ್ಪಷ್ಟವಾಗಿ ಗೋಚರವಾಗುತ್ತದೆ. ಅದರ ಫಲ ಮರಣ. ನಮ್ಮ ಹಿರಿಯರು ಜ್ಞಾನಿಗಳು ಇದನ್ನರಿತು ನಮಗೆ ಶ್ರದ್ಧೆ, ಗೌರವ ಇನ್ನೂ ಮುಂತಾದ ಮೌಲ್ಯಗಳನ್ನು ಬಾಲ್ಯದಲ್ಲಿಯೇ ಕಲಿಯಲು ಹೇಳುತ್ತಾರೆ.

ಜ್ಞಾನಿಗಳು ಮಾನಿತ್ವದ ಪ್ರದರ್ಶನ ಮಾಡುವುದಿಲ್ಲ. ತಮಗೆ ಎಲ್ಲ ತಿಳಿದಿದ್ದರೂ ಏನೂ ತಿಳಿಯದ ಹಾಗೆ ವರ್ತಿಸುತ್ತಾರೆ. ತಾವು ತಿಳಿಸಿದ ಜ್ಞಾನ ತಮಗೆ ತಮ್ಮ ಗುರುಗಳಿಂದ ಹಿರಿಯರಿಂದ ಬಂದದ್ದು ಎಂದು ಹೇಳುತ್ತಾರೆ.

[15/12 6:52 PM] Umakka: रामायण कथा का एक अंश, जिससे हमे सीख मिलती है “एहसास” की…

श्री राम, लक्ष्मण एवम् सीता’ मैया चित्रकूट पर्वत की ओर जा रहे थे,
राह बहुत पथरीली और कंटीली थी !
की यकायक श्री राम के चरणों मे कांटा चुभ गया !

श्रीराम रूष्ट या क्रोधित नहीं हुए, बल्कि हाथ जोड़कर धरती माता से अनुरोध करने लगे !
बोले- “माँ, मेरी एक विनम्र प्रार्थना है आपसे, क्या आप स्वीकार करेंगी ?”

धरती बोली- “प्रभु प्रार्थना नहीं, आज्ञा दीजिए !”

प्रभु बोले, “माँ, मेरी बस यही विनती है कि जब भरत मेरी खोज मे इस पथ से गुज़रे, तो आप नरम हो जाना !
कूछ पल के लिए अपने#ವಾಣಿ_147

ದೇವನು ಅಬಂಧಿತ:-
ಒಬ್ಬ ಆಗರ್ಭ ಸಿರಿವಂತ ಇದ್ದ. ಒಂದು ದಿನ ಆತನಿಗೆ ತನ್ನ ಸಂಪತ್ತಿನ ಬಲದಿಂದ ದೇವರನ್ನು ಹೇಗಾದರೂ ಬಂಧಿಸಬೇಕು ಎನಿಸಿತು. ಯಾರೋ ಹೇಳಿದರು- ‘ಹಾಗಾದರೆ ನೀನು ಒಂದು ಭವ್ಯವಾದ ಮಂದಿರವನ್ನು ಕಟ್ಟು. ಖಂಡಿತವಾಗಿಯೂ ದೇವರು ಅದರಲ್ಲಿ ತಾನಾಗಿಯೇ ಬಂದು ನೆಲೆಸುತ್ತಾನೆ.!’
ಸಿರಿವಂತನು ದೇಶ – ವಿದೇಶಗಳಿಂದ ಪ್ರಸಿದ್ಧ ಶಿಲ್ಪಿಗಳನ್ನು ಕರೆಯಿಸಿದ. ಹತ್ತಾರು ವರುಷ ಅವರೆಲ್ಲ ದುಡಿದು ಸುಪ್ರಸಿದ್ದ ಸುಂದರ ಮಂದಿರ ಕಟ್ಟಿದರು. ಒಂದು ದಿನ ಶುಭಮುಹೂರ್ತದಲ್ಲಿ ದೇವರ ಮೂರ್ತಿಯ ಪ್ರತಿಷ್ಠಾಪನೆಯು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ‘ದೇವರು ನನ್ನ ಮಂದಿರದಲ್ಲಿ ಬಂಧಿತನಾದ!’ ಎಂದು ಸಿರಿವಂತ ಭಾವಿಸಿದ. ಅದೇ ಸಂತಸದಲ್ಲಿ ಸಿರಿವಂತ ಮನೆಗೆ ಹೋಗಿ ಮಲಗಿದ. ಹತ್ತಿರದಲ್ಲಿಯೇ ಆತನ ಮೂಮ್ಮಗನೂ ಮಲಗಿದ್ದ.
“ನಮ್ಮಜ್ಜ ದೇವರನ್ನು ಮಂದಿರದಲ್ಲಿ ಕೂಡಿಹಾಕಿದ್ದಾನೆ. ಆತನನ್ನು ಮುಕ್ತಗೊಳಿಸಬೇಕು.” ಎಂದು ಬಾಲಕ ಚಿಂತಿಸಿದ. ನಿದ್ರೆ ಬರಲಿಲ್ಲ. ಮಧ್ಯರಾತ್ರಿಯಲ್ಲಿ ಬಾಲಕನು ಅಜ್ಜನ ಪಕ್ಕದಲ್ಲಿದ್ದ ಕೀಲಿಕೈ ತೆಗೆದುಕೊಂಡು ಮಂದಿರಕ್ಕೆ ಬಂದ. ದೊಡ್ಡ ದೇವರ ಗುಡಿಗೆ ದೊಡ್ಡ ಕೀಲಿಕೈ ಹಾಕಲಾಗಿತ್ತು. ಬಾಲಕನಿಗೆ ಅದು ನಿಲುಕಲಿಲ್ಲ. ಆದರೂ ಆತ ಬಾಗಿಲ ಕೀಲಿತೆಗೆಯಲು ಪ್ರಯತ್ನಿಸುತ್ತಿದ್ದ. ಅಷ್ಟರಲ್ಲಿ ಹಿಂದಿನಿಂದ ಯಾರೋ ಬಾಲಕನ ಬೆನ್ನು ಚಪ್ಪರಿಸಿ ಕೇಳಿದರು- “ಮಗು, ಏನು ಮಾಡುತ್ತಿರುವೆ ಈ ಮಧ್ಯರಾತ್ರಿಯಲ್ಲಿ ?” ಬಾಲಕ ಹೇಳಿದ – “ನಮ್ಮಜ್ಜ ಇಲ್ಲಿ ದೇವರನ್ನು ಬಂಧಿಸಿ ಬಿಟ್ಟಿದ್ದಾನೆ. ಆತನನ್ನು ಮುಕ್ತಗೊಳಿಸುತ್ತಿರುವೆ!” ಆ ವ್ಯಕ್ತಿ ಹೇಳಿದ – “ನಿಮ್ಮ ಅಜ್ಜನಿಗೆ ಎಲ್ಲೋ ಭ್ರಮೆಯಾಗಿದೆ. ದೇವರನ್ನು ಬಂಧಿಸುವ ಶಕ್ತಿ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ! ದೇವರು ಜಗದಗಲ, ಮುಗಿಲಗಲ, ಮಿಗೆಯಗಲ!……… ನಿತ್ಯಮುಕ್ತ!” ಈ ಮಾತನ್ನು ಕೇಳುತ್ತಲೇ ಬಾಲಕನಿಗೆ ಅಪಾರ ಹರ್ಷವಾಯಿತು! ಆ ಬಾಲಕನನ್ನು ಸಂತೈಸಿದವನು ಬೇರೆ ಯಾರೂ ಅಲ್ಲ ದಯಾಸಾಗರನಾದ ದೇವರೇ!
[15/12 10:07 PM] ‪+91 94486 65959‬: ಮಾನಿತ್ವ

—–ಅಂತರಂಗ—–

ಸ್ವಾಮೀ ಆದಿತ್ಯಾನಂದ ಸರಸ್ವತೀ
ಚಿನ್ಮಯ ಮಿಷನ್, ಮಂಡ್ಯ..

ನಮ್ಮ ಮನಸ್ಸು ಯಾವಾಗಲೂ ತಾನು ಎಲ್ಲರಿಗಿಂತ ಶ್ರೇಷ್ಠನಾಗಬೇಕು ಎಂಬಂತೆ ಬಯಸುತ್ತದೆ. ಇದನ್ನೇ ಶ್ರೀಕೃಷ್ಣ ಪರಮಾತ್ಮನು ಮಾನಿತ್ವವೆಂದು ಕರೆದಿದ್ದಾನೆ. ಈ ಮಾನಿತ್ವವು ನಮಗೆ ನಮ್ಮ ಭಾಷೆಯಲ್ಲಿ, ನಮ್ಮ ದೇಶದಲ್ಲಿ, ನಮ್ಮ ರೂಪದಲ್ಲಿ, ನಮ್ಮ ವಿದ್ಯೆಯಲ್ಲಿ, ನಮ್ಮ ಜಾತಿಯಲ್ಲಿ, ಕೆಲಸದಲ್ಲಿ ಹಾಗೂ ಇನ್ನೂ ಅನೇಕ ಕಡೆಗಳಲ್ಲಿ ಕಂಡುಬರುತ್ತದೆ. ಇದಕ್ಕೆ ಮೂಲಕಾರಣ ಸತ್ಯದ ಅರಿವು ನಮಗಿಲ್ಲದಿರುವುದು ಮತ್ತು ನಮ್ಮ ಅಜ್ಞಾನ. ನಾವು ಮನಸ್ಸನ್ನು ವಿಶಾಲಗೊಳಿಸುತ್ತ ಹೋದಂತೆ ನಮ್ಮ ಸಣ್ಣತನ ನಮ್ಮಿಂದ ದೂರವಾಗುತ್ತದೆ. ಒಂದು ವೇಳೆ ನಾವು ಹೀಗೆ ಮಾಡದಿದ್ದರೆ ನಮ್ಮ ಅಂತ್ಯಕ್ಕೆ ನಾವೇ ಬೀಜ ನೆಟ್ಟಂತಾಗುತ್ತದೆ. ಹಲವಾರು ಪುರಾಣ ಇತಿಹಾಸದಲ್ಲಿ ನಾವು ಈ ಸತ್ಯವನ್ನು ಕಂಡಿದ್ದೇವೆ.

ಪಾಂಡವರು ಮತ್ತು ಕೌರವರಿಗೆ ಗುರುಗಳು ದ್ರೋಣಾಚಾರ್ಯರು. ವಿದ್ಯಾಭ್ಯಾಸವಾದ ಮೇಲೆ ಗುರುದಕ್ಷಿಣೆಯನ್ನು ಸಮರ್ಪಿಸಲು ಅವರು ಬಂದಾಗ ಆಚಾರ್ಯರು ತಮ್ಮ ಹಾಗೂ ದ್ರುಪದನ ಸ್ನೇಹ ಹಾಗೂ ದ್ವೇಷದ ವೃತ್ತಾಂತವನ್ನು ತಿಳಿಸಿ, ದ್ರುಪದನನ್ನು ಯುದ್ಧದಲ್ಲಿ ಸೋಲಿಸಿ ತಮ್ಮ ಪಾದದಡಿಯಲ್ಲಿ ಬೀಳುವಂತೆ ಮಾಡಿದರೆ ಅದೇ ನಿಮ್ಮ ಗುರುದಕ್ಷಿಣೆ ಎನ್ನುತ್ತಾರೆ. ಅರ್ಜುನನು ಆಚಾರ್ಯರ ಆಸೆಯನ್ನು ಪೂರ್ಣಗೊಳಿಸುತ್ತಾನೆ. ಆಗ ದ್ರೋಣರು ದ್ರುಪದನಿಗೆ ‘ಈಗ ಪೂರ್ತಿ ರಾಜ್ಯ ನನ್ನದಾಯಿತು. ಆದರೂ ನೀನು ನನ್ನ ಮಿತ್ರ. ನಿನಗೆ ನನ್ನ ರಾಜ್ಯದಲ್ಲಿ ಅರ್ಧವನ್ನು ಕೊಡುತ್ತೇನೆ’ ಎಂದು ಹೇಳಿ ಆತನನ್ನು ಹಿಂದೆ ಕಳುಹಿಸುತ್ತಾರೆ.

ಅವಮಾನಗೊಂಡ ದ್ರುಪದ ಸುಮ್ಮನಿರದೆ ಒಂದು ಯಾಗವನ್ನು ಮಾಡಲು ಸಂಕಲ್ಪಿಸುತ್ತಾನೆ. ಆತನ ಆಸೆ ದ್ರೋಣನನ್ನು ಕೊಲ್ಲುವ ಒಬ್ಬ ಮಗ ಹಾಗೂ ಅರ್ಜುನನಿಗೆ ಕೊಟ್ಟು ವಿವಾಹ ಮಾಡಲು ಒಬ್ಬ ಮಗಳು ತನಗೆ ಜನಿಸಬೇಕು ಎಂಬುದಾಗಿರುತ್ತದೆ. ಯಾಗ ಫಲಪ್ರದವಾಗುತ್ತದೆ. ದ್ರುಪದ ತನ್ನ ಮಗನಾದ ಧೃಷ್ಟದ್ಯುಮ್ನನನ್ನು ದ್ರೋಣರ ಬಳಿಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸುತ್ತಾನೆ. ದ್ರುಪದನ ಮನಸ್ಸನ್ನು ಅರಿತಿದ್ದ ದ್ರೋಣರು ಆತನ ಮಗನಿಗೆ ವಿದ್ಯಾಭ್ಯಾಸ ನೀಡುತ್ತಾರೆ. ಆದರೆ ಕೊನೆಯಲ್ಲಿ ಶಿಷ್ಯನೇ ಕುರುಕ್ಷೇತ್ರದಲ್ಲಿ ಗುರುವನ್ನು ಸಂಹರಿಸುತ್ತಾನೆ.

ಇಲ್ಲಿ ನಾವು ಮಾನಿತ್ವದ ಉದಾಹರಣೆಯನ್ನು ಕಾಣುತ್ತೇವೆ. ದ್ರೋಣರಲ್ಲೂ ಮಾನಿತ್ವವು ಕಾಣುತ್ತದೆ ಹಾಗೂ ದ್ರುಪದನಲ್ಲೂ ಇದು ಸ್ಪಷ್ಟವಾಗಿ ಗೋಚರವಾಗುತ್ತದೆ. ಅದರ ಫಲ ಮರಣ. ನಮ್ಮ ಹಿರಿಯರು ಜ್ಞಾನಿಗಳು ಇದನ್ನರಿತು ನಮಗೆ ಶ್ರದ್ಧೆ, ಗೌರವ ಇನ್ನೂ ಮುಂತಾದ ಮೌಲ್ಯಗಳನ್ನು ಬಾಲ್ಯದಲ್ಲಿಯೇ ಕಲಿಯಲು ಹೇಳುತ್ತಾರೆ.

ಜ್ಞಾನಿಗಳು ಮಾನಿತ್ವದ ಪ್ರದರ್ಶನ ಮಾಡುವುದಿಲ್ಲ. ತಮಗೆ ಎಲ್ಲ ತಿಳಿದಿದ್ದರೂ ಏನೂ ತಿಳಿಯದ ಹಾಗೆ ವರ್ತಿಸುತ್ತಾರೆ. ತಾವು ತಿಳಿಸಿದ ಜ್ಞಾನ ತಮಗೆ ತಮ್ಮ ಗುರುಗಳಿಂದ ಹಿರಿಯರಿಂದ ಬಂದದ್ದು ಎಂದು ಹೇಳುತ್ತಾರೆ.

 

“ದೀಪ”:-

(ಸಂಗ್ರಹ: ಅರವಿಂದ್ – ಮೈಸೂರು)

ನಮ್ಮಲ್ಲಿ ಕೆಲವರು ಹೇಳುವುದುಂಟ
“ಯಾಕೆ ಅಷ್ಟೊಂದು ದೀಪಗಳನ್ನು ಹಚ್ಚಿ ಖರ್ಚು ಮಾಡುತ್ತಿ-ಎಣ್ಣ ಬೆಲೆ ಗಗನಕ್ಕೆ ಏರಿದೆ. ತುಪ್ಪದ ಬೆಲೆಯಂತು ಕೇಳೋರಿಲ್ಲ. ಇಂಥ ಕಾಲದಲ್ಲಿ ಒಂದೋ-ಎರಡೊ ದೀಪಗಳನ್ನು ಹಚ್ಚಿದರೆ ಆಗೋದಿಲ್ವೇ?” ಅನ್ನುತ್ತಾ ಬಯ್ಯುವರೂ ಉಂಟು.
ದೀಪಗಳನ್ನು ಭಗವಂತನ ಮುಂದೆ ಬೆಳಗಿ ಅನಂತ ಪುಣ್ಯವನ್ನ ಸಂಪಾದಿಸಬಹುದಲ್ಲವೇ?
ಅಂಥವರಿಗೆ ಉತ್ತರ.
“ನಮ್ಮ ಮನೆಗಳಲ್ಲಿ ದೀಪವನ್ನು ಎರಡೂ ಹೊತ್ತು ಹಚ್ಚುವೆವು.
ಕಾರ್ತೀಕ ಮಾಸದಲ್ಲಿ ದೀಪದಾನವನ್ನೂ ಮಾಡುವೆವು. ದಾನ ಮಾಡ ಬೇಕು ಅಂತ ಗೊತ್ತು
ದೀಪ ಬೆಳಗಿದರೆ ಅಥವಾ ದಾನ ಮಾಡಿದರೆ ಯಾವ ಫಲ ಉಂಟಾಗುತ್ತದೆ ?”
ಪದ್ಮ ಪುರಾಣ ಕೇಳಿದ್ದೇವೆ. ಅದರಲ್ಲಿ ರುದ್ರದೇವರು ಪಾರ್ವತಿಗೆ ಹೀಗೆ ಹೇಳುತ್ತಾರೆ

ನಿಮಿಷಂ ವಾ ನಿಮಿಷಾರ್ಧಂ ವಾ ಘೃತದೀಪಂ ನಿವೇದಯೇತ್
ಕಲ್ಪಕೋಟಿಸಹಸ್ರಾಣಿ ವಿಷ್ಣುಲೋಕೇ ಮಹೀಯತೇ!!

ದೀಪ ದಾನದಿಂದ ಏನು ಫಲ ಎಂಬ ಪ್ರಶ್ನೆ”
ದೀಪ ದಾನದಿಂದ ಉತ್ತಮವಾದ ನೇತ್ರಗಳು ಪ್ರಾಪ್ತಿಯಾಗುತ್ತದೆ.
“ದೀಪದಃ ಚಕ್ಷುರುತ್ತಮಮ್”
“ಒಂದು ಘೃತ ದೀಪವನ್ನು ಹಚ್ಚಿದರೇ ಭೂಮಿಯಲ್ಲಿ ರಾಜನಾಗುವ ಯೋಗವಿದೆ.
ಹಾಗೆಂದಮೇಲೆ ಬಹಳಷ್ಟು ದೀಪಗಳನ್ನು ಬೆಳಗಿದರೆ ಫಲವನ್ನು ಹೇಳಲು ನಾನೇ ಅಸಮರ್ಥ” ಎಂದು ರುದ್ರದೇವರು ಹೇಳುವರು ಅಂದಮೇಲೆ ಇದರ ಫಲ ಏನೆಂಬುದು ನಮಗೆ ಅರಿವಾಗುತ್ತದೆ.
ಶುಭವಾಗಲಿ…

“ದೀಪ”:-

(ಸಂಗ್ರಹ: ಅರವಿಂದ್ – ಮೈಸೂರು)

ನಮ್ಮಲ್ಲಿ ಕೆಲವರು ಹೇಳುವುದುಂಟ
“ಯಾಕೆ ಅಷ್ಟೊಂದು ದೀಪಗಳನ್ನು ಹಚ್ಚಿ ಖರ್ಚು ಮಾಡುತ್ತಿ-ಎಣ್ಣ ಬೆಲೆ ಗಗನಕ್ಕೆ ಏರಿದೆ. ತುಪ್ಪದ ಬೆಲೆಯಂತು ಕೇಳೋರಿಲ್ಲ. ಇಂಥ ಕಾಲದಲ್ಲಿ ಒಂದೋ-ಎರಡೊ ದೀಪಗಳನ್ನು ಹಚ್ಚಿದರೆ ಆಗೋದಿಲ್ವೇ?” ಅನ್ನುತ್ತಾ ಬಯ್ಯುವರೂ ಉಂಟು.
ದೀಪಗಳನ್ನು ಭಗವಂತನ ಮುಂದೆ ಬೆಳಗಿ ಅನಂತ ಪುಣ್ಯವನ್ನ ಸಂಪಾದಿಸಬಹುದಲ್ಲವೇ?
ಅಂಥವರಿಗೆ ಉತ್ತರ.
“ನಮ್ಮ ಮನೆಗಳಲ್ಲಿ ದೀಪವನ್ನು ಎರಡೂ ಹೊತ್ತು ಹಚ್ಚುವೆವು.
ಕಾರ್ತೀಕ ಮಾಸದಲ್ಲಿ ದೀಪದಾನವನ್ನೂ ಮಾಡುವೆವು. ದಾನ ಮಾಡ ಬೇಕು ಅಂತ ಗೊತ್ತು
ದೀಪ ಬೆಳಗಿದರೆ ಅಥವಾ ದಾನ ಮಾಡಿದರೆ ಯಾವ ಫಲ ಉಂಟಾಗುತ್ತದೆ ?”
ಪದ್ಮ ಪುರಾಣ ಕೇಳಿದ್ದೇವೆ. ಅದರಲ್ಲಿ ರುದ್ರದೇವರು ಪಾರ್ವತಿಗೆ ಹೀಗೆ ಹೇಳುತ್ತಾರೆ

ನಿಮಿಷಂ ವಾ ನಿಮಿಷಾರ್ಧಂ ವಾ ಘೃತದೀಪಂ ನಿವೇದಯೇತ್
ಕಲ್ಪಕೋಟಿಸಹಸ್ರಾಣಿ ವಿಷ್ಣುಲೋಕೇ ಮಹೀಯತೇ!!

ದೀಪ ದಾನದಿಂದ ಏನು ಫಲ ಎಂಬ ಪ್ರಶ್ನೆ”
ದೀಪ ದಾನದಿಂದ ಉತ್ತಮವಾದ ನೇತ್ರಗಳು

[16/12 7:56 AM] ‪+91 94486 65959‬: ದಿನಕ್ಕೊಂದು ಕಗ್ಗ

ಸ್ಥಿರ ಹಿಮಾಚಲ ಬೊಮ್ಮ, ಚರ ಜಾಹ್ನವಿಯೆ ಮಾಯೆ ।
ಪರಸತ್ವಘನದ ವಿದ್ರವರೂಪ ವಿಶ್ವ ।।
ಪರಮಾರ್ಥಕೊಂದಕ್ಷಿ ವ್ಯವಹಾರಕಿನ್ನೊಂದು ।
ಎರಡುಮೊಂದಾಂತರ್ಯ – ಮಂಕುತಿಮ್ಮ ।।

ಆಚಲವಾದಂತಹ ಹಿಮಾಲಯ ಪರ್ವತದಂತೆ ಪರಬ್ರಹ್ಮ ವಸ್ತುವು. ಜಗತ್ತಿನ ಮಾಯೆಯೇ ಆ ಹಿಮಾಲಯ ಪರ್ವತದಿಂದ ಹೊರಡುವ ಜಾಹ್ನವಿ,ಎಂದರೆ ಗಂಗಾನದಿಯಂತೆ. ಹಾಗೆಯೇ ಪರಸತ್ವ ಎನ್ನುವುದು
ಘನರೂಪವಾದರೆ, ಈ ವಿಶ್ವ ಆ ಪರಸತ್ವದ ದ್ರವ ರೂಪ. ಪರಮಾರ್ಥವನ್ನು ನೋಡುವ ಮತ್ತು ಜಗತ್ತಿನ ವ್ಯವಹಾರವನ್ನು ನೋಡುವ ನಮ್ಮ ದೃಷ್ಟಿ ಬೇರೆಬೇರೆಯಾದರೂ ಎರಡರೊಳಗಿರುವ ಅಂತರಂಗದ ಸತ್ವ ಒಂದೇ.

ಶುಭೋದಯ 🌞 ಶುಭದಿನ
#ಅಭಿಷ್ಟಿ ಪ್ರಕಾಶನ.
“The immovable Himalaya is like the Creator. The flowing Ganges is like the illusion of this creation. The world is the molten form of the solid matter of the universal truth. One who knows how to see the truth as well as the world in two different views (and balance them) will find peace inside.” – Mankutimma

Good Morning 🌞 Good Day 😊
#ABHISHTI Publication
[16/12 8:13 AM] ‪+91 94486 65959‬: ಸ್ವಾಮಿ ಆದಿತ್ಯಾನಂದ ಸರಸ್ವತೀ ಚಿನ್ಮಯ ಮಿಷನ್, ಮಂಡ್ಯ

Manasse Heege…

ಸ್ವಾಮಿ ಚಿನ್ಮಯಾನಂದರು ಬಹಳ ಸುಂದರವಾದ ಒಂದು ಕಥೆಯನ್ನು ಹೇಳುತ್ತಿದ್ದರು. ಒಂದು ಊರಿನಲ್ಲಿ ಒಂದು ಕಾಲಿಲ್ಲದ ಒಬ್ಬ ವ್ಯಕ್ತಿ ವಾಸಿಸುತ್ತಿದ್ದ. ಆತ ಪ್ರತಿನಿತ್ಯವೂ ಎರಡು ಮರದ ಕೋಲುಗಳ ಸಹಾಯದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ತನ್ನ ಕೆಲಸಕ್ಕೆ ನಡೆದುಹೋಗುತ್ತಿದ್ದ. ಆತನಿಗೆ ಬಹಳ ಬಡತನವಿತ್ತು. ಹೀಗೆ ಹಲವಾರು ವರ್ಷಗಳು ಕಳೆಯಲು ಈತನನ್ನು ಕಂಡ ಒಬ್ಬ ಉದಾರ ಹೃದಯದ ವ್ಯಕ್ತಿ ತನ್ನ ಸ್ವಂತ ಹಣದಿಂದ ಮೂರು ಚಕ್ರದ ಒಂದು ಸೈಕಲ್ ದಾನವಾಗಿ ಕೊಟ್ಟ. ಆ ಕಾಲಿಲ್ಲದ ವ್ಯಕ್ತಿಗೆ ಸ್ವರ್ಗವೇ ಭೂಮಿಗಿಳಿದಂತಿತ್ತು. ದಾನ ನೀಡಿದ ವ್ಯಕ್ತಿಗೆ ‘ಸ್ವಾಮೀ, ನೀವೇ ದೇವರು, ಇಷ್ಟು ದಿನ ನಾನು ಕಷ್ಟಪಡುತ್ತಿದ್ದದ್ದನ್ನು ಹಣವುಳ್ಳ ಹಲವಾರು ಜನ ಕಂಡಿದ್ದರು. ಆದರೆ ನೀವು ನನ್ನ ಕಷ್ಟವನ್ನು ಅರಿತು ಸಹಾಯ ಮಾಡಿರುವಿರಿ. ನೀವೇ ದೇವರು’ ಎಂದು ಹೇಳಿ ವಂದಿಸಿದ.

ಈಗ ಪ್ರತಿನಿತ್ಯವು ಮೂರು ಚಕ್ರದ ಸೈಕಲ್ಲಿನಲ್ಲಿ ಕುಳಿತು ಕೈಗಳ ಸಹಾಯದಿಂದ ಗಾಲಿಯನ್ನು ತಿರುವುತ್ತ ತನ್ನ ಕೆಲಸಕ್ಕೆ ಸಾಗುತ್ತಿದ್ದ. ಆತನ ಆನಂದಕ್ಕೆ ಪಾರವೇ ಇಲ್ಲವಾಯಿತು. ಹೀಗೆ ಒಂದೆರಡು ವರ್ಷ ಕಳೆಯಿತು. ಸೈಕಲ್ ದಾನ ಮಾಡಿದ್ದ ವ್ಯಕ್ತಿ ಕಾಲಿಲ್ಲದವನನ್ನು ಒಮ್ಮೆ ಕಂಡು ‘ನೆಮ್ಮದಿಯಿಂದ ಇರುವೆಯಾ?’ ಎಂದು ಪ್ರಶ್ನಿಸಿದ.

ಆಗ ಆತ ‘ಏನು ಹೇಳಲಿ ಸ್ವಾಮಿ? ಮೊದಲೇ ಕಾಲಿಲ್ಲ. ಈ ಕೈಗಳು ಸೋತುಹೋಗಿವೆ. ದಿನನಿತ್ಯ ಕೈಗಳು ಗಾಲಿಯನ್ನು ತಿರುಗಿಸಿ ತಿರುಗಿಸಿ ನಿಶ್ಶಕ್ತಿಯಿಂದ ಬಳಲುತ್ತಿವೆ. ತಾವು ಮನಸ್ಸು ಮಾಡಿ ನನಗೆ ಮೂರು ಚಕ್ರದ ಸ್ಕೂಟರ್ ಕೊಡಿಸಿದರೆ ಮಹದುಪಕಾರವಾಗುತ್ತದೆ’ ಎಂದು ಬೇಡಿಕೊಂಡ. ದಾನಿಯ ಹೃದಯ ಕಂಪಿಸಿತು. ತನ್ನ ಸ್ನೇಹಿತರ ಸಹಾಯದಿಂದ ಹಾಗೂ ತನ್ನ ಸ್ವಂತ ಹಣವನ್ನು ಸೇರಿಸಿ ಒಂದು ಮೂರು ಚಕ್ರದ ಸ್ಕೂಟರ್ ಆತನಿಗೆ ಕೊಡಿಸಿದ. ಕಾಲಿಲ್ಲದ ವ್ಯಕ್ತಿ ಬಹಳ ಸಂತೋಷಪಟ್ಟ. ಈಗ ಆತ ಪ್ರತಿನಿತ್ಯ ತನ್ನ ಕೈಗಳಿಂದ ಗಾಲಿಯನ್ನು ತಿರುಗಿಸಬೇಕಿರಲಿಲ್ಲ. ಕೇವಲ ತನ್ನ ಬಲಗೈಯಿಂದ ಆಕ್ಸಲೇಟರ್ ಕೊಟ್ಟರೂ ಗಾಡಿ ಮುಂದೆ ಸಾಗುತ್ತಿತ್ತು.

ಕಾಲಚಕ್ರ ಮುಂದೆ ಸಾಗಿತು. ಐದಾರು ವರ್ಷಗಳ ನಂತರ ಕಾಲಿಲ್ಲದ ವ್ಯಕ್ತಿ ಮೊದಲಿನಂತೆ ನಿರಾಶೆಯಿಂದ ಇರುವುದು ಕಂಡುಬಂತು. ಯಾರಾದರೂ ಆತನನ್ನು ಕೇಳಿದರೆ ಆತ ಸೂರ್ಯನ ಬಿಸಿಲು ಜಾಸ್ತಿ, ಮಳೆಯ ತೊಂದರೆ, ಹೆಚ್ಚು ಚಳಿ ಹೀಗೆ ಹಲವಾರು ಅನಾನುಕೂಲಗಳ ಕಾರಣಗಳನ್ನು ಕೊಡುತ್ತಿದ್ದ. ನಮ್ಮ ಮನಸ್ಸೇ ಹೀಗೆ. ಇರುವುದನ್ನು ಮರೆತು ಇಲ್ಲದ್ದನ್ನು ನೆನೆದು ದುಃಖಿಸುತ್ತಿರುತ್ತದೆ.
[16/12 8:13 AM] ‪+91 94486 65959‬: Read it….

8 boys were standing on a track for racing.

Ready !

Steady !

Bang !

With sound of Pistol all boys started running.

Hardly had they covered 10 to 15 steps,
1 boy slipped & fell.

He started crying due to pain.

When other 7 Boys heard him, all of them STOPPED running..

STOOD for a while,

turned BACK & RAN
towards him.

All the 7 Boys LIFTED the Boy,
pacified him,
joined hands together,
walked together &
reached WINNING Post.

Officials were shocked.

Many Eyes were
filled with tears.

It happened at Pune.

Race was conducted by
National Institute of
Mental Health…

All participants were
Mentally RETARDED.

What did they teach ?
Teamwork,
Humanity,
Sportsman spirit,
Love,
Care,
&
Equality..
[16/12 8:13 AM] ‪+91 94486 65959‬: ಶಿವ ಸೂತ್ರ – ಉದ್ಯಮೋ ಭೈರವಃ :

ಉದ್ಯೋಗವೇ ಭೈರವ

“ಉದ್ಯೋಗ” ವೆಂದರೆ ನೀನು ಶರೀರವೆಂಬ ಕಾರಾಗೃಹ ವನ್ನು ಬಿಟ್ಟು ಹೊರಗೆ ಬರಲು ಮಾಡುವ ಪ್ರಯಾಸ – ಪ್ರಯತ್ನ. ಅದೇ ಭೈರವ.

“ಭೈರವ” ಎಂಬ ಶಬ್ದ ಪಾರಿಭಾಶಿಕ ವಾದದ್ದು.

“ಭ” – ಎಂದರೆ ‘ಭರಣ’ – ಹೊತ್ತು ಕೊಳುವುದು.
“ರ” – ಎಂದರೆ  ‘ರವಣ’  – ಸಂಹಾರ.
“ವ” – ಎಂದರೆ ‘ವಮನ’ – ಹರಡುವುದು.

ಭೈರವ ಎಂದರೆ “ಬ್ರಹ್ಮ” – ಯಾವುದು ಎಲ್ಲವನ್ನು ಹೊತ್ತಿದೆಯೋ, ಸಂಬಾಳಿಸುತ್ತಿದೆಯೋ, ಯಾವುದು ನಮ್ಮ ಹುಟ್ಟಿಗೆ ಕಾರಣವೋ – ಸತ್ತು ಯಾವುದರಲ್ಲಿ ಸೇರಿಹೋಗುವೆವೋ, ಯಾವುದು ಅತಿ ಸಂಕುಚಿತ ವಾಗುವುದೋ – ಅನಂತ ವಿಸ್ತಾರವಾಗಿದೆಯೋ ಅದು. ಯಾವುದು ಸೃಷ್ಟಿ ಗೆ ಉದ್ಭವವೋ…ಪ್ರಳಯಂಕರವೋ – ಆ ಮೂಲ ಅಸ್ತಿತ್ವದ ಹೆಸರೇ ಭೈರವ.

ಶಿವನು ಹೇಳುವುದು – ‘ ಉದ್ಯಮವೇ ಭೈರವ’ ಎಂದು. ಎಂದು ನೀನು ಆಧ್ಯಾತ್ಮಿಕ ಜೀವನಕ್ಕೆ ಬೇಕಾಗುವ ಪ್ರಯತ್ನಗಳನ್ನು ಪ್ರಾರಂಭಿಸುವೆಯೋ ಅಂದು ನೀನು ಭೈರವನಾಗೊಡಗಿದಂತೆ. ನೀನು ಪರಮಾತ್ಮನೊಂದಿಗೆ ಒಂದಾಗತೊಡಗಿದಂತೆ. ಮುಕ್ತನಾಗಬೇಕೆಂಬ ನಿನ್ನ ಮೊಟ್ಟ ಮೊದಲ ಭಾವನೆಯೇ ಸಾಕು. ಇನ್ನು ನಿನಗೆ ಮುಟ್ಟಬೇಕಾದ ಗುರಿ ದೂರವುಳಿಯದು.
ಏಕೆಂದರೆ ಮೊದಲ ಹೆಜ್ಜೆ ಬಹುಮಟ್ಟಿಗೆ ಅರ್ಧಯಾತ್ರೆ ಮಾಡಿದಂತೆಯೇ.

‘ ಉದ್ಯಮವೇ ಭೈರವ’. ಪಡೆವುವೆ.
ಹೆಚ್ಚೇನು ಹೊತ್ತಾಗದು. ಗುರಿಮುಟ್ಟಲು ಹೊತ್ತು ಹಿಡಿಯಬಹುದು. ” ನಾನಿನ್ನು ಎದ್ದೇಳುವೆ.
ಈ ಶರೀರದಿಂದ ಮುಕ್ತನಾಗಿ ಮನ್ನಡೆಯುವೆ.
ಈ ವಾಸನೆಗಳನ್ನು ಜೇಡರಬಲೆಯನ್ನು ಹರಿದೊಗೆಯುವೆ “. ಈ ಭಾವನೆಗಳು ನಿನ್ನೊಳಗೆ ದಟ್ಟವಾಗುತ್ತಿದ್ದಂತೆಯೇ , ಹಂಬಲ ಹೆಚ್ಚಾಗುತ್ತಾ ಬಂದು ನೀನು ಒಡನೆಯೇ ಬೈರವನಾಗುವೆ. ಒಡನೆಯೇ ಬ್ರಹ್ಮ ದೊಂದಿಗೆ ಒಂದಾಗತೊಡಗುವೆ. ಅಸಲಿಗೆ ನೀನು ಒಂದೇ ಆಗಿರುವೆ. ಕೇವಲ ನಿನ್ನಲ್ಲಿ ಎಚ್ಚರ ಮೂಡಬೇಕು. ಬ್ರಹ್ಮ ನೆಂಬ ಆ ಮಹಾಸಾಗರದ ಒಂದು ತೊರೆಯೇ ನೀನಾಗಿರುವೆ. ಬ್ರಹ್ಮನೆಂಬ ಸೂರ್ಯನ ಕಿರಣವೇ ಆಗಿರುವೆ. ಬ್ರಹ್ಮನೆಂಬ ಆ ಮಹಾಕಾಶದ ಒಂದುತುಂಡೇ ನೀನಾಗಿರುವೆ.
ನಿನ್ನಲ್ಲಿ ಸ್ಮರಣೆ ಸ್ಫುರಿಸಬೇಕು ಅಷ್ಟೇ. ಸ್ಫುರಿಸಿದೊಡನೆ ಆ ಮಹಾಕಾಶದೊಂದಿಗೆ ನೀನು ಒಂದಾಗಿ ವಿಜೃಂಭಿಸುವೆ.

‘ ಉದ್ಯಮವೇ ಭೈರವ’. ಬಲವಾದ ಪ್ರಯತ್ನ ಘನೀಭೂತವಾದ ಪ್ರಯಾಸ ಬೇಕಷ್ಟೆ.  ಸತತವಾಗಿ ಬಡಿದಾಗ ಮಾತ್ರ ಗಾಢನಿದ್ರೆ ಮುರಿದೀತು. ಆಲಸ್ಯ ,ಉದಾಸೀನ ಮಾಡಿದರೆ ಆಗದು. ಒಂದು ಕೈಯಿಂದ ಮುರಿದು ಇನ್ನೊಂದು ಕೈಯಿಂದ ಕಟ್ಟುತ್ತಾ ಹೋದರೆ ಅದು ವ್ಯರ್ಥ, ಪುನಃ ಅಂಡೆಲೆತವೇ ಗತಿ.
ನಿಮ್ಮೆಲ್ಲಾ ಸಂಪೂರ್ಣ ಪ್ರಯತ್ನಗಳು ಸಂಲಗ್ನವಾಗಲಿ.

ಈ ಜಗತ್ತಿನಲ್ಲಿ ಅನ್ಯಾಯ ಆಗುವುದೇ ಇಲ್ಲ.ಇಲ್ಲಿ ನಡೆಯುವುದೆಲ್ಲಾ ನ್ಯಾಯವಾಗಿಯೇ ನಡೆಯುವುದು. ನ್ಯಾಯ ಅನ್ಯಾಯ ಗಳು ಮನುಷ್ಯನ ಪರಿಧಿಗೆ ಒಳಪಟ್ಟಿಲ್ಲ.
ಈ ಜಗತ್ತಿನಲ್ಲಿ ಕೆಲವು ನಿಯಮಗಳವೆ. ಆ ನಿಯಮಗಳ ಹೆಸರೇ ‘ಧರ್ಮ’. ಧರ್ಮವೆಂಬುದು ಈ ಜಗತ್ತಿನ ತಟಸ್ಥ ನಿಯಮಗಳು. ಅಡ್ಡಾದಿಡ್ಡಿಯಾಗಿ ನಡೆದರೆ ಕೆಡವುವುದು, ನೇರವಾಗಿ ನಡೆದರೆ ಸಂಬಾಳಿಸುವುದು.
ಧರ್ಮವನ್ನು ಹಿಂದೂಗಳು “ಯತ” ಎಂದು ಕರೆದಿರುವರು. ಅದು ಪರಮ ನಿಯಮ. ಅದಕ್ಕೆ ನಿನ್ನ ಮೇಲೆ ಯಾವ ಪಕ್ಷಪಾತವೂ ಇಲ್ಲ. ಕೆಡವಬೇಕೆಂದೂ ಇಲ್ಲ, ಎತ್ತ ಬೇಕೆಂದೂ ಇಲ್ಲ. ಎರಡೂ ಸ್ಥಿತಿ ಗೂ ಅದು ಅದು ನೆರವಾಗುವುದು. ಹೇಗೆ ಬೇಕಿದ್ದರೂ ಅದನ್ನು ಬಳಸಿಕೊಳ್ಳಬಹುದು. ಅದು ಮುಕ್ತವಾದದ್ದು. ಅದರ ಬಾಗಿಲು ಮುಚ್ಚಿಲ್ಲ.
ಅದರ ಬಾಗಿಲಿಗೆ ನೀನು ಬೇಕಾದರೆ ತಲೆ ಚಚ್ಚಿಕೊಳ್ಳಬಹುದು. ಬಾಗಿಲ ಒಳಹೋಗುವ ಇಚ್ಛೆಯಿದ್ದಲ್ಲಿ ಒಳಹೋಗಲೂಬಹುದು. ಅದು ತಟಸ್ಥ.

‘ ಉದ್ಯಮವು ಭೈರವ’. ಅತೀವ ಶ್ರಮಪಡಬೇಕು. ಉದ್ಯಮದ ಅರ್ಥವೇ ಗಾಢ ಪರಿಶ್ರಮವೆಂದು. ಆ ಶ್ರಮದಲ್ಲಿ ನೀನು ಸಮಗ್ರವಾಗಿ ಬೆರೆಯಬೇಕು. ಆಗ ಮಾತ್ರ ಅದು ಉದ್ಯಮವಾದೀತು. ಆಗ ನೀನು ಭೈರವನಾಗಲು ಹೊತ್ತು ಹಿಡಿಯದು.

Msg as recd & shared
“Cow is just an animal like a hen or goat… then why should one not kill and eat it?”

Cow is also an animal, but… a cow has many specialities that no other animal (not even human beings) has in this world. This is the reason that Hindus consider cow as ‘mother’ after their own mother, and pray to the cow with respect calling it “go-matha”.

These are some truths about go-matha.

·  If a cow eats something poisonous by mistake, and we drink its milk, will we fall ill? To find out, one cow was regularly fed a particular quantity of a poison every day. After 24 hours, its blood, urine, dung and milk were tested in a lab to check where the poison could be found. In this way, the tests were done not for 1 or 2 days, but continuously for 90 days in All India Institute of Medical Sciences (AIIMS) New Delhi. The researcher did not find any trace of poison in milk, blood, urine or dung of that cow.

Then where did this poison fed for 90 days go? Just like Lord Shiva held poison in his throat, the go-matha hid the entire poison in her throat. This is a special quality that no other animal has.

·  This is the only creature that inhales oxygen and also exhales oxygen.

· Cow milk has the quality of countering poison.

·  There are diseases that medical science has not yet understood; urine of Go-matha has the power to cure them

·  If cow-ghee and rice are cooked together, two powerful gases called ethylene-oxide, propylene-oxide are released. Propylene-oxide is the best gas used for creating artificial rain.

·  Cow-urine is the world’s best killer of microbes

·  With medicines made using cow dung and cow urine, stomach-related ailments can be cured.

·  We can save ourselves from radio-waves by plastering the home floors and area outside home with cow-dung

· Cow-dung has the power to destroy the microbes causing cholera

· If 10 grams of cow-ghee is put in fire (yagnya), 1 ton of oxygen is generated.

If you feel useful, pl share with your contacts.

 

ನಮ್ಮ ಸನಾತನ ಧರ್ಮದಲ್ಲಿ
33 ಕೋಟಿ ದೇವಾನುದೇವತೆಗಳಿದ್ದಾರೆಂದು ನಂಬಿದ್ದೇವೆ..

ಯಾರಾದರೂ ಬಂದು ನಿಮ್ಮ
ದೇವರುಗಳ ಹೆಸರೇಳಿ ಎಂದು ಕೇಳಿದರೆ
೩೩ಕೋಟಿ ದೇವರುಗಳ ಹೆಸರನ್ನು
ಹೇಳಬಲ್ಲೆವೇ.??

ಖಂಡಿತ ಸಾಧ್ಯವಿಲ್ಲ..

ಅಬ್ಬಬ್ಬಾ ಎಂದರೆ ನೂರು , ನೂರೈವತ್ತು
ದೇವರುಗಳ ಹೆಸರನ್ನು ಹೇಳಬಹುದು..
33 ಕೋಟಿ ದೇವರುಗಳ ಹೆಸರನ್ನು ತಿಳಿಸಲು
ಯಾರಿಂದಲೂ ಸಾಧ್ಯವಿಲ್ಲ ಬಿಡಿ..

ಹಾಗಾದರೆ ನಮ್ಮ ನಂಬಿಕೆ ತಪ್ಪೇ..??

33ಕೋಟಿ ದೇವರುಗಳು ಎಂಬ ಕಲ್ಪನೆ ತಪ್ಪು..!!

ಅದು 33 ದೇವರುಗಳ ಕುಟುಂಬವೆಂದು..ಅಚ್ಚರಿಯಾಯಿತೇ..??

ಈ ಲೇಖನವನ್ನು ತಪ್ಪದೆ ಓದಿ..
ಶೇರ್ ಮಾಡಿ..

ಕೋಟಿ ಎಂಬ ಶಬ್ದ ಸಂಸ್ಕೃತದಿಂದ ಬಂದಿದ್ದು..
ಕೋಟಿ ಎಂಬುದು (Crore) ಹೌದು ನಿಜ..
ಆದರೆ ಅದರ ಮತ್ತೊಂದು ಅರ್ಥ ವಿಧ(Types)
ಅಂದರೆ ಸನಾತನ ಧರ್ಮದಲ್ಲಿ 33 ಕೋಟಿ
ದೇವರುಗಳಿವೆ ಎಂಬರ್ಥದಲ್ಲಿ ಕೋಟಿ
ಶಬ್ದವನ್ನು ಬಳಸಬೇಕಿಲ್ಲ…

ಇದರ ಸ್ಪಷ್ಟಾರ್ಥ ,

33 ದೇವರುಗಳ ಪರಿವಾರವೆಂದು..!!

ಅವು -12 ಆದಿತ್ಯರು +11 ರುದ್ರರು +8
ವಸುಗಳು + ಪ್ರಜಾಪತಿ ಬ್ರಹ್ಮ + ಶ್ರೀಹರಿ ವಿಷ್ಣು =
ಒಟ್ಟಿಗೆ 33 ದೇವಕುಟುಂಬಗಳು..

12 ಆದಿತ್ಯರು (ದ್ವಾದಶಾದಿತ್ಯರು) – ತ್ವಷ್ಟ ,
ಪೂಷ , ವಿವಸ್ವಾನ್ , ಮಿತ್ರ , ಧಾತಾ,
ವಿಷ್ಣು , ಭಗ , ವರುಣ , ಸವಿತೃ , ಶಕ್ರ ,
ಅಂಶ , ಅರ್ಯಮಾ. 11 ರುದ್ರರು
(ಏಕಾದಶರುದ್ರಾಃ) – ಮನ್ಯು ,
ಮನು , ಮಹಿನಸ , ಮಹಾನ್ , ಶಿವ ,
ಋತಧ್ವಜ, ಉಗ್ರರೇತಾ , ಭವ , ಕಾಲ ,
ವಾಮದೇವ , ಧೃತವೃತ..

8 ವಸುಗಳು (ಆಷ್ಟವಸವಃ) – ದ್ರೋಣ , ಪ್ರಾಣ,
ಧ್ರುವ , ಅಕ , ಅಗ್ನಿ , ದೋಷ , ವಸು , ವಿಭಾವಸು.
ಈ ಜಗತ್ತಿನ ಸೃಷ್ಟಿಕರ್ತ ಬ್ರಹ್ಮ ಹಾಗೂ ಜಗತ್ತಿನ
ಪರಿಪಾಲಕ ಮಹಾವಿಷ್ಣು..

ಆದ್ದರಿಂದ 33 ಕೋಟಿ
ದೇವರುಗಳು ಎಂಬುದೇ ತಪ್ಪು ಕಲ್ಪನೆ..
೩೩ ದೇವತಾಪರಿವಾರಗಳಷ್ಟೇ..

ವಸ್ತುತಃ ಸನಾತನಧರ್ಮದಲ್ಲಿ ದೇವನೊಬ್ಬನೇ..
ಆತ ಬ್ರಹ್ಮನ್..
ದೇವನೊಬ್ಬನಾದರೂ ನಾಮ ಹಲವು..
ಯಾವ ದೇವರನ್ನು ಪೂಜಿಸಿದರೂ ಅದು
ಸರ್ವಶಕ್ತನಾದ ಬ್ರಹ್ಮನನ್ನೇ ಸೇರುತ್ತದೆ.

“ಏಕಂ ಸದ್ವಿಪ್ರಾಃ ಬಹುಧಾ ವದಂತಿ”
(ಇರುವುದೊಂದೇ ಸತ್ (ಪರಮಾತ್ಮ) ಆದರೆ
ಜನರು ಬಹಳ ಹೆಸರಿನಿಂದ ಕರೆಯುತ್ತಾರೆ)

ದಿನಕ್ಕೊಂದು ಕಗ್ಗ

ತರಣಿ ಕಿರಣದ ನಂಟು ಗಗನ ಸಲಿಲದ ನಂಟು ।
ಧರಣಿ ಚಲನೆಯ ನಂಟು ಮರುತನೊಳ್ನಂಟು ॥
ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ ।
ಕಿರಿದು ಪಿರಿದೊಂದಂಟು – ಮಂಕುತಿಮ್ಮ ॥ ೭೧ ॥

ಸೂರ್ಯನ ಮತ್ತು ಕಿರಣದ ಸಂಬಂಧ, ಆಕಾಶದ ಮತ್ತು ಮಳೆ ನೀರಿನಸಂಬಂಧ, ಭೂಮಿಯ ಸುತ್ತುವಿಕೆಯ ಸಂಬಂಧ, ಮತ್ತು ಅದಕ್ಕನುಗುಣವಾಗಿ ಬೀಸುವ ಗಾಳಿಯ ಸಂಬಂಧ,ಹೀಗೆ ಒಂದಕ್ಕೊಂದು ನಂಟು ಹಾಕಿಕೊಂಡು ಹಲವಾರು ಬಗೆಯ ಸಂಬಂಧಗಳ ಒಂದು ಗಂಟೆ ಈ ಜಗತ್ತು ಇದರಲ್ಲಿ ಕೆಲವು ಸಣ್ಣ ಸಣ್ಣ ನಂಟುಗಳು ಮತ್ತೆ ಕೆಲವು ದೊಡ್ಡದಾದ ಗಂಟುಗಳು ಎಂದು ಈ ಜಗತ್ತಿನ ಎಲ್ಲವಸ್ತುಗಳ ಪರಸ್ಪರ ಸಂಬಂಧಗಳನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಶುಭೋದಯ 🌞 ಶುಭದಿನ 😊
#ಉತ್ತಿಷ್ಠಭಾರತ #ಡಿವಿಜಿ

This whole world is made of complex knot of connections – some small and some big. The sun is related to his rays, the sky has attachment to the water below, earth is connected to its movement, together they are connected to the flow of air. – Mankutimma

Good Morning 🌞 Good Day 😊
#UttishtaBharatha #DVG

Leave a comment

Filed under ವಾಟ್ಸಪ್